ಕರ್ನಾಟಕ

karnataka

ಆಮೆ ಗತಿಯಲ್ಲಿ ರನ್​.. 'ಕ್ರಿಕೆಟ್​ ದೇವರಿ'ಗೂ ಇಷ್ಟವಾಗದ ಧೋನಿ-ಜಾಧವ್ ಜೊತೆಯಾಟ!

By

Published : Jun 23, 2019, 2:04 PM IST

ಮಧ್ಯಮ ಓವರ್​ಗಳಲ್ಲಿ ಕ್ರೀಸ್‌ನಲ್ಲಿದ್ದ ಎಂ ಎಸ್ ಧೋನಿ ಹಾಗೂ ಕೇದಾರ್​ ಜಾಧವ್​ ಆಮೆಗತಿಯಲ್ಲಿ ಸ್ಕೋರ್​ ಗಳಿಸಿದರು ಎಂಬುದು ಕ್ರಿಕೆಟ್​ ಅಭಿಮಾನಿಗಳ ಆರೋಪ. ಇದಕ್ಕೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಸಹ ದನಿಗೂಡಿಸಿದ್ದು, ಇಬ್ಬರ ಜೊತೆಯಾಟ ಅಷ್ಟು ಸಮಾಧಾನ ತಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

Sachin Tendulkar

ನವದೆಹಲಿ:ನಿನ್ನೆ ನಡೆದ ಭಾರತ ಹಾಗೂ ಆಫ್ಘಾನಿಸ್ತಾನದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಂಟಿಂಗ್ ಆಯ್ದುಕೊಂಡ ಭಾರತ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲಿಲ್ಲವೆಂಬುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಮಧ್ಯಮ ಓವರ್​ಗಳಲ್ಲಿ ಕಣದಲ್ಲಿದ್ದ ಎಂ ಎಸ್ ಧೋನಿ ಹಾಗೂ ಕೇದರ್​ ಜಾಧವ್​ ಆಮೆಗತಿಯಲ್ಲಿ ಸ್ಕೋರ್​ ಗಳಿಸಿದರು ಎಂಬುದು ಕ್ರಿಕೆಟ್​ ಅಭಿಮಾನಿಗಳ ಆರೋಪ. ಇದಕ್ಕೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಸಹ ದನಿಗೂಡಿಸಿದ್ದು, ಇಬ್ಬರ ಜೊತೆಯಾಟ ಅಷ್ಟು ಸಮಾಧಾನ ತಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಿನ್ನೆಯ ಪಂದ್ಯ ಅಷ್ಟು ಸಮಾಧಾನ ತಂದಿಲ್ಲ. ಇನ್ನೂ ಚೆನ್ನಾಗಿ ಆಟವಾಡಬಹುದಿತ್ತು. ಧೋನಿ ಹಾಗೂ ಕೇದಾರ್​ ಜೊತೆಯಾಟ ಖುಷಿಯನ್ನೇ ತರಲಿಲ್ಲ. ಇಬ್ಬರೂ ತೀರಾ ನಿಧಾನವಾಗಿ ಆಡಿದರು. ಸ್ಪಿನ್ ಬೌಲಿಂಗ್​ ನಡುವೆ 34 ಓವರ್​ಗಳನ್ನು ಕ್ರಮಿಸಿದ್ದರೂ, ರನ್ ಗಳಿಕೆ ಮಾತ್ರ 119 ಆಗಿತ್ತು. ಆ ಸಮಯದಲ್ಲಿ ಧನಾತ್ಮಕ ಅಂಶವೇ ಇರಲಿಲ್ಲ ಎಂದಿದ್ದಾರೆ.

2-3 ಡಾಟ್​ ಬಾಲ್​ಗಳೇ ಹೆಚ್ಚಾಗಿದ್ದವು. ವಿರಾಟ್​ ವಿಕೆಟ್​ ಕಳೆದುಕೊಂಡ ನಂತರ 38ನೆಯ ಹಾಗೂ 45ನೆಯ ಓವರ್​ಗಳಲ್ಲಿ ನಾವು ಹೆಚ್ಚು ರನ್ ಮಾಡಲಾಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಂದ ಸಾಕಷ್ಟು ಸ್ಕೋರ್ ದಾಖಲಾಗಲಿಲ್ಲ. ಹೆಚ್ಚು ರನ್​ ಗಳಿಸುವ ಆಸಕ್ತಿ ಬ್ಯಾಟ್ಸ್​ಮನ್​ಗಳಲ್ಲಿ ಹೆಚ್ಚಬೇಕು ಎಂದು ಸಲಹೆ ನೀಡಿದ್ದಾರೆ.50 ಓವರ್​ಗಳಲ್ಲಿ 224 ಸ್ಕೋರ್​ ಕಲೆ ಹಾಕಿದ ಟೀಂ ಇಂಡಿಯಾದಲ್ಲಿ, ಕೊಹ್ಲಿ 67 ಹಾಗೂ ಜಾದವ್ 52 ರನ್ ಗಳಿಸಿದ್ದು ಬಿಟ್ಟರೆ, ಉಳಿದವರಾರೂ ಬ್ಯಾಟಿಂಗ್​ ಪರಾಕ್ರಮ ತೋರಲಿಲ್ಲ.

For All Latest Updates

TAGGED:

ABOUT THE AUTHOR

...view details