ಕರ್ನಾಟಕ

karnataka

ಭಾರತಕ್ಕೆ ಕೇಳಿಸಲಿಲ್ಲ ಪಾಕ್​ ಪ್ರಾರ್ಥನೆ: ಕೊಹ್ಲಿ ಪಡೆ ಸೋಲಿಗೆ ಅಖ್ತರ್ ಬೇಸರ

By

Published : Jul 1, 2019, 1:41 PM IST

ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾ ಇನ್ನೂ ಉತ್ತಮ ಪ್ರದರ್ಶನ ತೋರಬಹುದಿತ್ತು ಎಂದು ಪಾಕ್​ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್ ಹೇಳಿದ್ದಾರೆ.

ಪಾಕ್​ ಪ್ರಾರ್ಥನೆ ಭಾರತಕ್ಕೆ ಭಾರತಕ್ಕೆ ಕೇಳಿಸಲಿಲ್ಲ

ಬರ್ಮಿಂಗ್​ಹ್ಯಾಮ್:ನಿನ್ನೆ ನಡೆದ ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಪಡೆ ಸೋಲು ಕಂಡಿದ್ದು ಪಾಕ್​ ಕ್ರಿಕೆಟ್​​ನ ಮಾಜಿ ಆಟಗಾರರಿಗೆ ಬೇಸರ ತರಿಸಿದೆ.

ಟೀಂ ಇಂಡಿಯಾ ನಿನ್ನೆ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಪಾಕಿಸ್ತಾನದ ಸೆಮಿ ಫೈನಲ್​ ಹಾದಿ ಸುಗಮವಾಗುತ್ತಿತ್ತು. ಆದ್ರೆ ಕೊಹ್ಲಿ ಪಡೆ 31 ರನ್​ಗಳಿಂದ ಸೊಲು ಕಂಡಿದ್ದು, ಪಾಕ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಪಾಕ್ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್​ ಟೀಂ ಇಂಡಿಯಾ ಸೋಲಿಗೆ ಟ್ವಿಟ್ಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 'ಭಾರತ ತಂಡ ಇನ್ನೂ ಉತ್ತಮವಾಗಿ ಆಡಬಹುದಿತ್ತು ಮೊದಲ 10 ಓವರ್​ ಮತ್ತು ಕಡೆಯಲ್ಲಿ 5 ವಿಕೆಟ್ ಇದ್ದಾಗಲೂ ಉತ್ತಮ ಪ್ರದರ್ಶನ ತೋರಬಹುದಿತ್ತು. ನಮ್ಮ ಭರವಸೆ ಈಗ ನ್ಯೂಜಿಲೆಂಡ್​ ಮೇಲಿದೆ ಎಂದಿದ್ದಾರೆ.

ಅಲ್ಲದೆ ತಮ್ಮ ಯೂಟ್ಯೂಬ್​​ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅಖ್ತರ್ ' ಪಾಕಿಸ್ತಾನದ ಪ್ರತಿಯೊಬ್ಬ ಅಭಿಮಾನಿ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದರು. ಆದರೆ ನಮ್ಮ ಪ್ರಾರ್ಥನೆ ಭಾರತಕ್ಕೆ ತಲುಪಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಸೋಲಿನ ಬಗ್ಗೆ ಟ್ವೀಟ್​ ಮಾಡಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ವಕಾರ್ ಯುನಿಸ್, 'ನೀನು ಜೀವನದಲ್ಲಿ ಏನು ಮಾಡಿದ್ದೀಯ ಎಂಬುದು ನೀನು ಯಾರು ಎಂಬುದನ್ನ ನಿರ್ಧರಿಸುತ್ತದೆ. ಪಾಕಿಸ್ತಾನ ಸೆಮಿಪೈನಲ್​ಗೆ ಹೋಗುತ್ತದೋ ಬಿಡುತ್ತದದೋ ನನಗೆ ಅದರ ಚಿಂತೆ ಇಲ್ಲ. ಆದರೆ ಕೆಲವು ಚಾಂಪಿಯನ್ನರ ಕ್ರೀಡಾಪಟುತ್ವ ಪರೀಕ್ಷೆಗೆ ಒಳಪಟ್ಟಿತ್ತು ಅದರಲ್ಲಿ ಅವರು ಸೋಲು ಕಂಡಿದ್ದಾರೆ' ಎಂದು ಟೀಂ ಇಂಡಿಯಾ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

TAGGED:

ABOUT THE AUTHOR

...view details