ಕರ್ನಾಟಕ

karnataka

ETV Bharat / sports

ನಾಲ್ಕನೇ ಕ್ರಮಾಂಕಕ್ಕೆ ಬ್ಯಾಟ್ಸ್​ಮನ್​ ಸಿಕ್ಕಾಯ್ತು.. ಯುವಿ ಹೇಳಿದ್ದು ಯಾರ ಬಗ್ಗೆ ಗೊತ್ತಾ? - ರಿಷಭ್ ಪಂತ್

ನಾಲ್ಕನೇ ಕ್ರಮಾಂಕಕ್ಕೆ ರಿಷಭ್ ಪಂತ್​ ಉತ್ತಮ ಆಯ್ಕೆಯಾಗಬಲ್ಲರು ಎಂದು ಯುವರಾಜ್​ ಸಿಂಗ್ ಭವಿಷ್ಯ ನುಡಿದಿದ್ದಾರೆ.

ಯುವಿ ಹೇಳಿದ್ದು ಯಾರ ಬಗ್ಗೆ ಗೊತ್ತಾ

By

Published : Jul 3, 2019, 11:00 AM IST

Updated : Jul 3, 2019, 11:15 AM IST

ನವದೆಹಲಿ:ವಿಶ್ವಕಪ್​ ಟೂರ್ನಿ ಆರಂಭವಾದಾಗಿನಿಂದ ಟೀಂ ಇಂಡಿಯಾಕ್ಕೆ ನಾಲ್ಕನೇ ಕ್ರಮಾಂಕಕ್ಕೆ ಯಾವ ಆಟಗಾರನನ್ನ ಕಣಕ್ಕಿಳಿಸಬೇಕು ಎಂಬುದೇ ಒಂದು ತಲೆನೋವಾಗಿದ್ದು, ಈವರೆಗೆ ಹಲವು ಆಟಗಾರರನ್ನ ಕೂಡ ಬದಲಾವಣೆ ಮಾಡಲಾಗಿದೆ.

ವಿಜಯ್​ ಶಂಕರ್​, ಕೆ ಎಲ್ ರಾಹುಲ್​ ಮತ್ತು ರಿಷಭ್​ ಪಂತ್‌ರನ್ನ ನಾಲ್ಕನೇ ಕ್ರಮಾಂಕದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಸಿತ್ತು. ಅಂತಿಮವಾಗಿ ರಿಷಭ್ ಪಂತ್ ನಾಲ್ಕನೇ ಕ್ರಮಾಂಕಕ್ಕೆ ಸರಿಯಾದ ಆಟಗಾರನಾಗುತ್ತಾನೆ ಎಂದು ಭಾರತ ತಂಡದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಭವಿಷ್ಯ ನುಡಿದಿದ್ದಾರೆ.

ನಿನ್ನೆ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್​ 41 ಎಸೆತಗಳಲ್ಲಿ6 ಬೌಡರಿ, ಒಂದು ಸಿಕ್ಸರ್​ ಸಹಿತ 48 ರನ್​ ಗಳಿಸಿದ್ದರು. ಪಂದ್ಯದ ಬಳಿಕ ಟ್ವೀಟ್​ ಮಾಡಿರುವ ಯುವಿ, ಫೈನಲಿ ಭಾರತಕ್ಕೆ ಭವಿಷ್ಯದ ನಾಲ್ಕನೇ ಕ್ರಮಾಂಕದ ಆಟಗಾರ ಸಿಕ್ಕಾಯ್ತು ಎಂದು ಬರೆದುಕೊಂಡಿದ್ದಾರೆ.ಶಿಖರ್​ ಧವನ್​ ಗಾಯದ ಸಮಸ್ಯೆಯಿಂದ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ನಂತರ ಅವರ ಸ್ಥಾನಕ್ಕೆ ಬಿಸಿಸಿಐ, ರಿಷಭ್ ಪಂತ್​ರನ್ನ ಆಯ್ಕೆಮಾಡಿತ್ತು.

Last Updated : Jul 3, 2019, 11:15 AM IST

ABOUT THE AUTHOR

...view details