ಮ್ಯಾಂಚೆಸ್ಟರ್: ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತ ತಂಡ ಸೆಮಿಫೈನಲ್ನಲ್ಲಿ ಕಿವೀಸ್ ಬೌಲರ್ಗಳ ಮಾರಕ ದಾಳಿಗೆ 18 ರನ್ಗಳಿಂದ ಸೋಲು ಕಂಡಿದೆ. ಆದ್ರೆ ಈ ಪಂದ್ಯದ ರೋಚಕ ಘಟ್ಟದಲ್ಲಿ ಧೋನಿ ರನ್ ಔಟ್ಗೆ ಬಲಿಯಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ರೋಚಕ ಘಟ್ಟದಲ್ಲಿ ಧೋನಿ ರನೌಟ್... ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಅಂಪೈರ್ ನಿರ್ಲಕ್ಷ್ಯ?
ನಿನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಎಂ.ಎಸ್ ಧೋನಿಯ ರನ್ಔಟ್ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಂಪೈರ್ ನಿರ್ಲಕ್ಷ್ಯದಿಂದ ಧೋನಿ ಬಲಿಯಾಗಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ನಿಯಮದ ಪ್ರಕಾರ ಅಂತಿಮ 10 ಓವರ್ಗಳ ಬ್ಯಾಟಿಂಗ್ ಪವರ್ ಪ್ಲೇನಲ್ಲಿ 30 ಯಾರ್ಡ್ ಸರ್ಕಲ್ನಿಂದ ಹೊರಗೆ ಕೇವಲ 5 ಜನ ಫೀಲ್ಡರ್ಗಳಿರಬೇಕು. ಆದ್ರೆ ಧೋನಿ ರನ್ಔಟ್ ಆಗುವ ಎಸೆತಕ್ಕೂ ಮೊದಲು ಗ್ರಾಫಿಕ್ಸ್ನಲ್ಲಿ ತೋರಿಸುವಂತೆ 6 ಜನ ಕ್ಷೇತ್ರ ರಕ್ಷಕರು 30 ಯಾರ್ಡ್ನಿಂದ ಹೊರಗೆ ಫೀಲ್ಡಿಂಗ್ ಮಾಡುತ್ತಿದ್ದರು.
ಒಂದು ವೇಳೆ ನಿಯಮಕ್ಕಿಂತ ಹೆಚ್ಚಿನ ಫೀಲ್ಡರ್ಗಳು 30 ಯಾರ್ಡ್ ಸರ್ಕಲ್ನಿಂದ ಹೊರಗಿದ್ದರೆ ನೋ ಬಾಲ್ ನೀಡಬೇಕು. ಆದ್ರೆ ಅಂಫೈರ್ ನಿರ್ಲಕ್ಷ್ಯದಿಂದ ನೋಬಾಲ್ ಇರುವುದು ಗೊತ್ತಾಗಿಲ್ಲ. ಇದರಿಂದ ಧೋನಿ ರನ್ಔಟ್ಗೆ ಬಲಿಯಾಗಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.