ಹೈದರಾಬಾದ್: ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿರುವ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಾಟಿ ರಾಯುಡುಗೆ ಐಸ್ಲೆಂಡ್ ಕ್ರಿಕೆಟ್ ಹೊಸ ಆಫರ್ ನೀಡಿದೆ.
ಮಹತ್ವದ ಟೂರ್ನಿಯಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ರಾಯುಡು ವಿಫಲರಾಗಿದ್ದಾರೆ. ಶಿಖರ್ ಧವನ್ ಮತ್ತು ವಿಜಯ್ ಶಂಕರ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ರಿಷಭ್ ಪಂತ್ ಮತ್ತು ಮಯಾಂಕ್ ಅಗರ್ವಾಲ್ಗೆ ಬಿಸಿಸಿಐ ಮಣೆ ಹಾಕಿದ್ದು, ರಾಯುಡುಗೆ ನಿರಾಸೆಯಾಗಿದೆ.
ಈ ಮಧ್ಯೆ ಐಸ್ಲೆಂಡ್ ಕ್ರಿಕೆಟ್ ತಂಡ ಅಂಬಟಿ ರಾಯುಡುಗೆ ಆಫರ್ ಒಂದನ್ನ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಐಸ್ಲೆಂಡ್ ಕ್ರಿಕೆಟ್ ತಂಡ ತಮ್ಮ ದೇಶದ ಪರ ಕ್ರಿಕೆಟ್ ಆಡುವಂತೆ ಕೇಳಿಕೊಂಡಿದೆ. ಅಲ್ಲದೆ ತಾವು ಬರುವುದಾದರೆ ಯಾವ ಯಾವ ದಾಖಲೆಗಳನ್ನ ತರಬೇಕು ಎಂದು ತಿಳಿಸಿದೆ. ಟ್ವಿಟರ್ನಲ್ಲಿ ಒಂದು ದಾಖಲೆಯನ್ನ ಪೋಸ್ಟ್ ಮಾಡಿ ಐಸ್ಲೆಂಡ್ ಕ್ರಿಕೆಟ್ ಈ ಮೇಲಿನ ದಾಖಲೆಯನ್ನ ಓದಲು 3ಡಿ ಗ್ಲಾಸ್ ಬೇಡ, ಸಾಮಾನ್ಯವಾದ ಕನ್ನಡಕ ದರಿಸಿಕೊಂಡೇ ಓದ ಬಹುದು ಎಂದಿದೆ.
ಟೀಂ ಇಂಡಿಯಾದಲ್ಲಿ ತಮ್ಮ ಹೆಸರು ಇಲ್ಲದ್ದರಿಂದ ಆಕ್ರೋಶಗೊಂಡಿದ್ದ ರಾಯುಡು, ವಿಶ್ವಕಪ್ ವೀಕ್ಷಣೆ ಮಾಡಲು ಹೊಸ 3ಡಿ ಕನ್ನಡಕ ಆರ್ಡರ್ ಮಾಡಿರುವೆ ಎಂದು ತಮ್ಮ ಟ್ವಿಟರ್ನಲ್ಲಿ ಈ ಹಿಂದೆ ಬರೆದುಕೊಂಡಿದ್ದರು.