ಮುಂಬೈ:ಭಾರತ ಕ್ರಿಕೆಟ್ ತಂಡದಲ್ಲಿ ವಾಲ್ ಎಂದೇ ಕರೆಸಿಕೊಳ್ಳುತ್ತಿದ್ದ ಕನ್ನಡಿಗ ದ್ರಾವಿಡ್ ಶನಿವಾರ 47ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.
ಭಾರತ ಕ್ರಿಕೆಟ್ ತಂಡದಲ್ಲಿ ಸಮಕಾಲಿನರಾದ ದ್ರಾವಿಡ್, ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಮೈದಾನದ ಒಳಗೆ ಹೇಗೆ ಸ್ನೇಹಿತರೋ ಹಾಗೆ ಮೈದಾನದೊಳಗೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಶನಿವಾರ ದ್ರಾವಿಡ್ ಜನ್ಮದಿನಕ್ಕೆ ಎಲ್ಲ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭ ಕೋರಿದ್ದು ಸಚಿನ್ ತೆಂಡೂಲ್ಕರ್ ಸಹಾ ಬ್ಯಾಟಿಂಗ್ ಚಾಣಕ್ಯನಿಗೆ ತಮ್ಮದೇ ಆದ ರೀತಿಯಲ್ಲಿ ಶುಭಕೋರಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೇ ಆದ ರಕ್ಷಣಾತ್ಮಕ ಆಟಕ್ಕೆ ಪ್ರಸಿದ್ದರಾದ ದ್ರಾವಿಡ್ ವಿಶ್ವದ ಘಟಾನುಘಟಿ ವೇಗಿಗಳನ್ನು ತಮ್ಮ ಡಿಫೆನ್ಸಿಂಗ್ ಬ್ಯಾಟಿಂಗ್ ಕೌಶಲ್ಯದ ಮೂಲಕ ಜಿಗುಪ್ಸೆ ತರಿಸುತ್ತಿದ್ದರು. ಸಚಿನ್ ಕೂಡ ಇದೇ ವಿಚಾರವನ್ನು ಮನದಲ್ಲಿಟ್ಟುಕೊಂಡು " ಹ್ಯಾಪಿ ಬರ್ತಡೇ ಜಮ್ಮಿ... ನಿನ್ನ ಬ್ಯಾಟಿಂಗ್ ಯಾವಾಗಲು ಬೌಲರ್ಗಳಲ್ಲಿ ದೊಡ್ಡ ಜಾಮ್ ಉಂಟು ಮಾಡುತ್ತಿತ್ತು" ಎಂದು ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.
ಸೆಹ್ವಾಗ್ ಕೂಡ ಎಂದಿನಂತೆ ತಮ್ಮದೇ ಆದ ವಿನೋಧದ ಶೈಲಿಯಲ್ಲಿ ಶುಭಕೋರಿದ್ದಾರೆ. "ರುಬ್ಬವುದನ್ನ ಅಡುಗೆ ಮನೆಯಲ್ಲಿ ಮಿಕ್ಸರ್ ಗ್ರೈಂಡರ್ನಲ್ಲಿ ಮಾತ್ರ ಎಂದು ನಾನೆಂದುಕೊಂಡಿದ್ದೆ ಆದರೆ ದ್ರಾವಿಡ್ ಒಬ್ಬರು ಮಾತ್ರ ಕ್ರಿಕೆಟ್ ಪಿಚ್ನಲ್ಲಿ ಚೆನ್ನಾಗಿ ರುಬ್ಬುತ್ತಿದ್ದರು, ನಮ್ಮ ಬಳಿ ವಾಲ್ ಇದ್ದರೆ ಎಲ್ಲವೂ ಇದ್ದಂತೆ" ಎಂದು ತಮಾಷೆಯ ರೀತಿಯಲ್ಲಿ ಶುಭಕೋರಿದ್ದಾರೆ.
ಹರ್ಭಜನ್ ಸಿಂಗ್, ವಿವಿಎಸ್ ಲಕ್ಷ್ಣ್, ಮೊಹಮ್ಮದ್ ಕೈಫ್ ಶುಭಕೋರಿದ್ದಾರೆ. ಯುವ ಕ್ರಿಕೆಟಿಗರಾದ ವೃದ್ಧಿಮಾನ್ ಸಹಾ ಮತ್ತು ರಹಾನೆ ಸಹಾ ದ್ರಾವಿಡ್ ಅವರೇ ನಮಗೇ ಸ್ಫೂರ್ತಿ ಎಂದು ಹೊಗಳಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.