ಕರ್ನಾಟಕ

karnataka

By

Published : Oct 27, 2019, 5:55 PM IST

ETV Bharat / sports

ಇವರು ದೇಶಕ್ಕೆ ಮತ್ತೊಂದು ವಿಶ್ವಕಪ್‌ ತರುವ ಭರವಸೆ ಹುಟ್ಟಿಸಿದ ಟೀನೇಜ್​ ಕ್ರಿಕೆಟರ್ಸ್ .!​

2019-20ರ ವಿಜಯ್​ ಹಜಾರೆ ಒಂದು ಕಡೆ ಮಳೆಸುರಿದರೆ ಮತ್ತೊಂದು ಕಡೆ ರನ್​ ಮಳೆ ಸುರಿಸಿ ಕರ್ನಾಟಕ ತಂಡಕ್ಕೆ ದೇವದತ್​ ಪಡಿಕ್ಕಲ್​ ಪ್ರಶಸ್ತಿ ದೊರೆಕಿಸಿಕೊಟ್ಟರೆ, ಮುಂಬೈ ಪರ ಆಡಿದ 6 ಪಂದ್ಯಗಳಲ್ಲಿ 564 ರನ್​ಗಳಿಸಿ ಯಶಸ್ವಿ ಜೈಸ್ವಾಲ್​ ಭವಿಷ್ಯ ಭಾರತ ತಂಡದ ಕ್ರಿಕೆಟರ್​ ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.

Vijay Hajare Trophy

ಬೆಂಗಳೂರು: ಬಿಸಿಸಿಐ ಆಯೋಜಿಸುವ ಏಕದಿನ ಟೂರ್ನಿಯಾದ ವಿಜಯ್​ ಹಜಾರೆ ಟೂರ್ನಿ ಮುಗಿದು ಕರ್ನಾಟಕ ತಂಡ 5 ಬಾರಿಯ ಚಾಂಪಿಯನ್ ತಮಿಳುನಾಡನ್ನು ಮಣಿಸಿ ಚಾಂಪಿಯನ್​​ ಪಟ್ಟಕ್ಕೇರಿದೆ.

ಈ ಟೂರ್ನಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳೂ ಪ್ರಾಬಲ್ಯ ಸಾಧಿಸಿದ್ದವು. ಕೊನೆಯಲ್ಲಿ ಪ್ರಶಸ್ತಿ ಮಾತ್ರ ಕರ್ನಾಟಕ ಕೈ ಸೇರಿತ್ತು. ಇದಕ್ಕೆ ಕಾರಣಕರ್ತರಲ್ಲಿ 19 ರ ಯುವಕ ದೇವದತ್​ ಪಡಿಕ್ಕಲ್​ ಪಾತ್ರ ಪ್ರಮುಖವಾಗಿತ್ತು.

ಟೂರ್ನಿ ಟಾಪ್​ ಸ್ಕೋರರ್ ಕನ್ನಡಿಗ​ ದೇವದತ್​ ಪಡಿಕ್ಕಲ್:ಮನೀಷ್​ ಪಾಂಡೆ, ಕೆಎಲ್​ ರಾಹುಲ್‌ರಂತಹ ರಾಷ್ಟ್ರೀಯ ಆಟಗಾರರ ಬೆಂಬಲ ಪಡೆದು ಸರಣಿಯುದ್ದಕ್ಕೂ ವಿಜೃಂಭಿಸಿದ ದೇವದತ್​ ಪಡಿಕ್ಕಲ್,​ ಟೂರ್ನಿಯಲ್ಲಿ ಬರೋಬ್ಬರಿ 609 ರನ್​ಗಳಿಸಿ ಟಾಪ್​ ಸ್ಕೋರರ್​ ಎನಿಸಿಕೊಂಡರು. ಭಾರತ ಅಂಡರ್​ 19 ತಂಡದಲ್ಲಿ ಆಡುತ್ತಿರುವ ಈತ ಟೂರ್ನಿಯಲ್ಲಿ 2 ಶತಕ ಹಾಗೂ 5 ಅರ್ಧಶತಕ ದಾಖಲಿಸಿದ್ದು ವಿಶೇಷವಾಗಿತ್ತು.

6 ಪಂದ್ಯಕ್ಕೆ 564 ರನ್​ ಸಿಡಿಸಿದ ಜೈಸ್ವಾಲ್​:ಮುಂಬೈ ತಂಡದ ಪರ ಕೇವಲ 6 ಪಂದ್ಯಗಳನ್ನಾಡಿದ 17 ವರ್ಷದ ಯಶಸ್ವಿ ಜೈಸ್ವಾಲ್​ 112ರ ಸರಾಸರಿಯಲ್ಲಿ 564 ರನ್​ ಗಳಿಸಿ ಗಮನ ಸೆಳೆದಿದ್ದಾರೆ. ಜೈಸ್ವಾಲ್​ ಆಡಿದ 6 ಪಂದ್ಯಗಳಲ್ಲಿ 3 ಶತಕ ಹಾಗೂ 1 ಅರ್ಧಶತಕ ದಾಖಲಿಸಿದ್ದಾರೆ. ಇದರಲ್ಲಿ 203 ರನ್​ಗಳಿಸಿ ದ್ವಿಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನೂ ಸಹಾ ತಮ್ಮ ಹೆಸರಿಗೆ ಬರೆದುಕೊಂಡರು.

ಪ್ರಿಯಮ್​​ ಗರ್ಗ್​ 287 ರನ್​:ಪ್ರಸ್ತುತ ಭಾರತ ಅಂಡರ್​ 19 ತಂಡದ ನಾಯಕನಾಗಿರುವ ಪ್ರಿಯಮ್​ ಗರ್ಗ್​ ಉತ್ತರ ಪ್ರದೇಶದ ಪರ 6 ಪಂದ್ಯಗಳಲ್ಲಿ ಬ್ಯಾಟಿಂಗ್​ ನಡೆಸಿದ್ದು, ತಲಾ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದಂತೆ 287 ರನ್​ಗಳಿಸಿ ಮಿಂಚಿದ್ದಾರೆ.

ಈ ಮೂವರು ಯುವ ಬ್ಯಾಟ್ಸ್​ಮನ್​ಗಳು ಭಾರತ ಅಂಡರ್​-19 ತಂಡದಲ್ಲಿದ್ದಾರೆ. ಮುಂದಿನ ವರ್ಷ ಐಸಿಸಿ ಅಂಡರ್​-19 ವಿಶ್ವಕಪ್​ ಆಯೋಜನೆ ಮಾಡುತ್ತಿರುವುದರಿಂದ ಭಾರತ ತಂಡದಕ್ಕೆ ಕಿರಿಯರ ವಿಭಾಗದಲ್ಲಿ ಮತ್ತೊಂದು ಪದಕ ತಂದುಕೊಡಲು ಇವರ ಆಟದಿಂದ ಸಾಧ್ಯವಾಗಲಿದೆ ಎಂಬ ಮಾತು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು, ಡಿಸೆಂಬರ್​ನಲ್ಲಿ ಐಪಿಎಲ್​ ಹರಾಜು ಪ್ರಕ್ರಿಯೆ ಇರುವುದರಿಂದ ಈ ಟೀನೇಜ್​ ಕ್ರಿಕೆಟರ್​ಗಳ ಮೇಲೆ ಹಲವು ಪ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details