ಕರ್ನಾಟಕ

karnataka

By

Published : Oct 8, 2020, 4:35 PM IST

ETV Bharat / sports

ಜಮ್ಮ- ಕಾಶ್ಮೀರ ಕ್ರಿಕೆಟ್​ ಮೈದಾನಕ್ಕೆ ಭೇಟಿ ನೀಡಿದ ರೈನಾ: ಲೋಕಲ್ ಟೂರ್ನಿ ವೀಕ್ಷಿಸಿದ ಕ್ರಿಕೆಟರ್​

ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಯುವ ಕ್ರಿಕೆಟಿಗರೊಂದಿಗೆ ಕೆಲವು ಸಂತೋಷದಾಯಕ ಕ್ಷಣಗಳನ್ನು ಹಂಚಿಕೊಂಡರು. ಹಾಗೂ ಫೈನಲ್​ ಪಂದ್ಯದಲ್ಲಿ ಭಾಗವಹಿಸುತ್ತಿರುವ ಪಂಜು ಮತ್ತು ಸಗಮ್ ಅಂಡರ್ 19 ತಂಡಗಳ ಆಟಗಾರರೊಂದಿಗೆ ಸಂವಾದ ನಡೆಸಿದರು. ಫೈನಲ್​ ಪಂದ್ಯದಲ್ಲಿ ಅಂಡರ್​ ಸಗಮ್ ಅಂಡರ್​ 19 ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಸುರೇಶ್ ರೈನಾ
ಸುರೇಶ್ ರೈನಾ

ಅನಂತ್​ನಾಗ್​: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಜಮ್ಮು ಕಾಶ್ಮೀರ ಆಡಳಿತ ಮಂಡಳಿಯ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಡೆಯುತ್ತಿರುವ ‘ಡೂರು​ ಅಂಡರ್​ 19 ಟಿ-20‘ ಟೂರ್ನಮೆಂಟ್​ನ ಫೈನಲ್ ಪಂದ್ಯ ನಡೆಯುತ್ತಿರುವ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟಿಗ ಸುರೇಶ್​ ರೈನಾ ಭೇಟಿ ನೀಡಿ, ಸ್ಥಳೀಯ ಆಟಗಾರರನ್ನು ಹುರಿದುಂಬಿಸಿದರು.

ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಯುವ ಕ್ರಿಕೆಟಿಗರೊಂದಿಗೆ ಕೆಲವು ಸಂತೋಷದಾಯಕ ಕ್ಷಣಗಳನ್ನು ಹಂಚಿಕೊಂಡರು. ಹಾಗೂ ಫೈನಲ್​ ಪಂದ್ಯದಲ್ಲಿ ಭಾಗವಹಿಸುತ್ತಿರುವ ಪಂಜು ಮತ್ತು ಸಗಮ್ ಅಂಡರ್ 19 ತಂಡಗಳ ಆಟಗಾರರೊಂದಿಗೆ ಸಂವಾದ ನಡೆಸಿದರು. ಫೈನಲ್​ ಪಂದ್ಯದಲ್ಲಿ ಅಂಡರ್​ ಸಗಮ್ ಅಂಡರ್​ 19 ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಜಮ್ಮು - ಕಾಶ್ಮೀರಕ್ಕೆ ಭೇಟಿ ನೀಡಿದ ಸುರೇಶ್ ರೈನಾ

ಟೂರ್ನಿಯ ಸಂಘಟಕರು ಮತ್ತು ಕ್ರಿಕೆಟ್​ ಆಟಗಾರರು, ತಮ್ಮ ಪ್ರತಿಭೆ ಪ್ರದರ್ಶಿಸಲು ಅಗತ್ಯವಿರುವ ಎಲ್ಲ ಸೌಲಭ್ಯವುಳ್ಳ ಕ್ರಿಕೆಟ್ ಮೈದಾನವನ್ನು ಉನ್ನತೀಕರಣ ಮತ್ತು ಅಭಿವೃದ್ಧಿಗೊಳಿಸಬೇಕೆಂದು ರೈನಾ ಸಮ್ಮುಖದಲ್ಲಿ ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಸಿ ರಮೇಶ್​, ಸುರೇಶ್​ ರೈನಾ ಅವರು ಸ್ವತಃ ಒಬ್ಬ ಕಾಶ್ಮೀರಿ ಹಾಗೂ ಈ ಮಣ್ಣಿನ ಮಗನಾಗಿದ್ದಾರೆ. ಅವರು ಯೂನಿಯನ್ ಟೆರಿಟೋರಿಯಲ್ಲಿ ಕ್ರಿಕೆಟ್​ ಅಭಿವೃದ್ಧಿಗೊಳಿಸಲು ಸಂಪೂರ್ಣ ಬದ್ಧರಾಗಿದ್ದಾರೆ ಎಂದು ಹೇಳಿದರು.

ನಿವೃತ್ತ ಕ್ರಿಕೆಟರ್​ ಸುರೇಶ್ ರೈನಾ

ಟಿಕ್​ಬಾಗ್​ ಮಟ್ಟನ್​ ಮತ್ತು ಡೂರು​ಗಳಲ್ಲಿ ಕ್ರಿಕೆಟ್ ಮೈದಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಕ್ರಿಕೆಟ್​ಗಳನ್ನು ಸಹ ನೀಡಲಾಗುವುದು ಎಂದು ಯುವ ಕ್ರಿಕೆಟಿಗರಿಗೆ ಭರವಸೆ ನೀಡಿದರು.

ಈ ಸಂದರ್ಭದದಲ್ಲಿ ರೈನಾ ಅವರೊಂದಿಗೆ ಅನಂತ್‌ನಾಗ್​ನ ಡಿಡಿಸಿ ಕೆ.ಕೆ. ಸಿದ್ಧ, ಎಸ್‌ಎಸ್‌ಪಿ ಸಂದೀಪ್ ಚೌಧರಿ, ಡಿವೈಎಸ್‌ಎಸ್‌ಒ ಮತ್ತು ಜಿಲ್ಲಾಡಳಿತದ ಇತರ ಅಧಿಕಾರಿಗಳು ಹಾಗೂ ಅನೇಕ ಯುವ ಕ್ರಿಕೆಟ್ ಉತ್ಸಾಹಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ಈ ಕ್ರಿಕೆಟ್ ಪಂದ್ಯಾವಳಿಯ ಸಂಘಟಕರು ಉಪಸ್ಥಿತರಿದ್ದರು.

ABOUT THE AUTHOR

...view details