ಕರ್ನಾಟಕ

karnataka

By

Published : Aug 18, 2020, 4:41 PM IST

ETV Bharat / sports

Exclusive​: ಉತ್ತರಾಖಂಡ ತಂಡವನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವುದೇ ನನ್ನ ಗುರಿ - ಜಾಫರ್​

'ಈಟಿವಿ ಭಾರತ'ಕ್ಕೆ ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಉತ್ತರಾಖಂಡ ತಂಡಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದಾಗಿ ರಣಜಿ ತಂಡದ ಕೋಚ್​ ವಾಸೀಮ್​ ಜಾಫರ್​ ತಿಳಿಸಿದ್ದಾರೆ.

ವಾಸಿಮ್​ ಜಾಫರ್​
ವಾಸಿಮ್​ ಜಾಫರ್​

ಡೆಹ್ರಾಡೂನ್​: ಉತ್ತರಾಖಂಡ ಕ್ರಿಕೆಟ್​ ಅಸೋಸಿಯೇಷನ್​ನ ಕೋಚ್​ ಆಗಿ ನೇಮಕಗೊಂಡ ನಂತರ ವಾಸೀಮ್​ ಜಾಫರ್​ ಮೊದಲ ಬಾರಿಗೆ ರಾಜಧಾನಿ ಡೆಹ್ರಾಡೂನ್​ಗೆ ಭೇಟಿ ನೀಡಿದ್ದು, ಭಾನುವಾರ ರಣಜಿ ಆಟಗಾರರ ಜೊತೆ ಕೆಲವು ಸಮಯ ಕಳೆದು, ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ 'ಈಟಿವಿ ಭಾರತ'ಕ್ಕೆ ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಮಾತನಾಡಿದ ಅವರು, ಉತ್ತರಾಖಂಡ ತಂಡಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದಾಗಿ ತಿಳಿಸಿದ್ದಾರೆ.

ಉತ್ತರಾಖಂಡ ತಂಡದ ಆಟಗಾರರು ಅತ್ಯುನ್ನತ ಸಾಮರ್ಥ್ಯವುಳ್ಳವರಾಗಿದ್ದಾರೆ. ಕಳೆದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ ಒಂದು ಸಂಪೂರ್ಣ ತಂಡವಾಗಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ ಎಂದಿದ್ದಾರೆ.

ರಣಜಿ ಕ್ರಿಕೆಟ್​ ಕೋಚ್​ ವಾಸೀಮ್​ ಜಾಫರ್​ ಎಕ್ಸ್​ಕ್ಲೂಸಿವ್​ ಸಂದರ್ಶನ ​

ಮಾತು ಮುಂದುವರಿಸಿ, ಆಟಗಾರರ ಕೌಶಲವನ್ನು ಹೆಚ್ಚಿಸುವುದು ಮತ್ತು ಉತ್ತರಾಖಂಡ ರಣಜಿ ತಂಡವನ್ನು ಬೇರೆ ಹಂತಕ್ಕೆ ಕೊಂಡೊಯ್ಯುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಉತ್ತರಾಖಂಡ ಹಿರಿಯರ ತಂಡ 2019ರ ಋತುವಿನಲ್ಲಿ ಗ್ರೂಪ್​ ಸಿ ಯಲ್ಲಿ ಕೊನೆಯ ಸ್ಥಾನ ಪಡೆದಿದ್ದರಿಂದ ಪ್ಲೇಟ್​ ಗ್ರೂಪ್​ಗೆ ಕುಸಿದಿದೆ.

ಆದ್ದರಿಂದ ತಂಡವನ್ನು ಮತ್ತೆ ಎಲೈಟ್ ಗ್ರೂಪ್‌ಗೆ ಏರಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುವುದು. ಉನ್ನತ ಟೂರ್ನಮೆಂಟ್​ಗಳಲ್ಲಿ ಉತ್ತಮ ಸಾಧನೆ ಮಾಡಲು ಆಟಗಾರರನ್ನು ಕೌಶಲದಿಂದ ಸಜ್ಜುಗೊಳಿಸುವ ತಂತ್ರವನ್ನು ಹೊಂದಿರುವುದಾಗಿ ಜಾಫರ್​ ಹೇಳಿದ್ದಾರೆ.

ಮುಂದಿನ ಋತುವಿನಲ್ಲಿ ತಮ್ಮ ತಂಡದಿಂದ ಉತ್ತಮ ಪ್ರದರ್ಶನವನ್ನು ಜಾಫರ್ ಆಶಿಸಿದ್ದಾರೆ. ತಾವು ಮಂಡಳಿ ಸೇರಿರುವುದರಿಂದ ಆಟಗಾರರು ಉತ್ಸುಕರಾಗಿದ್ದಾರೆ. ಈ ತಂಡ ನಾಕೌಟ್​ ಹಂತ ಪ್ರವೇಶಿಸುವುದು ನಿಜಕ್ಕೂ ಸವಾಲಿನದ್ದಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details