ಕರ್ನಾಟಕ

karnataka

ETV Bharat / sports

ಕೋಚ್​ ಹುದ್ದೆಗೆ ರಾಜೀನಾಮೆ: ವಾಸೀಂ ಜಾಫರ್​ ಪ್ರಕರಣ ತನಿಖೆಗೆ ಉತ್ತರಾಖಂಡ ಸಿಎಂ ಆದೇಶ! - ಜಾಫರ್​ ಕೋಚ್​ ಹುದ್ದೆಗೆ ರಾಜೀನಾಮೆ

ತಂಡದ ಆಯ್ಕೆಯ ವಿಚಾರದಲ್ಲಿ ಆಯ್ಕೆ ಸಮಿತಿ ಮತ್ತು ಉತ್ತರಾಖಂಡ್​​ ಕ್ರಿಕೆಟ್ ಅಸೋಸಿಯೇಷನ್​ ಕಾರ್ಯದರ್ಶಿ ಮಹೀಮ್ ವರ್ಮಾ ಸಾಕಷ್ಟು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬೇಸತ್ತು ಇ-ಮೇಲ್​ ಮೂಲಕ ವಾಸೀಂ ಜಾಫರ್​ ರಾಜೀನಾಮೆ ಸಲ್ಲಿಸಿದ್ದರು.

Wasim Jaffer
Wasim Jaffer

By

Published : Feb 16, 2021, 3:24 PM IST

ಡೆಹ್ರಾಡೂನ್​:ಉತ್ತರಾಖಂಡ್​ನ ಹಿರಿಯ ಕ್ರಿಕೆಟ್​​ ತಂಡದ ಮುಖ್ಯ ಕೋಚ್​ ಸ್ಥಾನಕ್ಕೆ ವಾಸೀಂ ಜಾಫರ್ ರಾಜೀನಾಮೆ ನೀಡಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದ್ದು, ಇದರ ತನಿಖೆ ನಡೆಸಲು ಅಲ್ಲಿನ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.

ವಾಸೀಂ ಜಾಫರ್​ ಕೋಚ್​ ಆಗಿದ್ದ ಸಂದರ್ಭದಲ್ಲಿ ಧರ್ಮ ಆಧಾರಿತ ಆಯ್ಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕಾಗಿ ಅವರು ಕಳೆದ ಫೆ. 8ರಂದು ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸಿಎಂ ತ್ರಿವೇಂದ್ರ ಸಿಂಗ್ ರಾವತ್​ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.

ಓದಿ: ಕೋಚ್​ ಶಿಫಾರಸುಗಳನ್ನು ಸ್ವೀಕರಿಸದಿದ್ದರೆ ಆ ಸ್ಥಾನದಲ್ಲಿದ್ದು ಪ್ರಯೋಜನವೇನು: ಜಾಫರ್ ಪ್ರಶ್ನೆ

ವಾಸೀಂ ಜಾಫರ್ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಉತ್ತರಾಖಂಡ ಕ್ರಿಕೆಟ್​ ಅಸೋಷಿಯೇಷನ್​​ ಮುಖ್ಯಮಂತ್ರಿ ರಾವತ್​​ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿತ್ತು. ತಂಡದ ಆಯ್ಕೆಯಲ್ಲಿ ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿದ್ದು, ಅದರಿಂದ ಬೇಸತ್ತು ತಾವು ಕೋಚ್​ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಜಾಫರ್​ ಹೇಳಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಉತ್ತರಾಖಂಡ ಕ್ರಿಕೆಟ್​ ಸಂಸ್ಥೆಯ ಕಾರ್ಯದರ್ಶಿ ಮಹೀಮ್​ ವರ್ಮಾ, ಜಾಫರ್​ ತಮ್ಮ ಧರ್ಮದ ಆಟಗಾರರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

ABOUT THE AUTHOR

...view details