ಕರ್ನಾಟಕ

karnataka

By

Published : Feb 8, 2021, 10:40 AM IST

ETV Bharat / sports

ಹಿಮನದಿ ದುರಂತಕ್ಕೆ ಮಿಡಿದ ಪಂತ್ ಮನ​: ರಕ್ಷಣಾ ಕಾರ್ಯಾಚರಣೆಗೆ ಟೆಸ್ಟ್​ ಪಂದ್ಯದ ವೇತನ ದೇಣಿಗೆ

ಪ್ರಸ್ತುತ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಆಡುತ್ತಿರುವ ಪಂತ್, ಉತ್ತರಾಖಂಡ್​ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾತರ್ಯಾಚರಣೆಗೆ ನೆರವಾಗಲು ಟೆಸ್ಟ್​ ಪಂದ್ಯದಲ್ಲಿ ತಮಗೆ ಸಿಗುವ ವೇತನವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

Uttarakhand glacier burst: Rishabh Pant to donate match fee for rescue efforts
ಪಂದ್ಯದ ವೇತನ ದೇಣಿಗೆ ನೀಡಿದ ಪಂತ್

ನವದೆಹಲಿ:ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಗಳಿಗಾಗಿ ತಮ್ಮ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡುವುದಾಗಿ ಭಾರತ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಹಾಯ ಮಾಡುವಂತೆ ಕೋರಿದ್ದಾರೆ.

ಪ್ರಸ್ತುತ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಆಡುತ್ತಿರುವ ಪಂತ್, ಈ ವಿಪತ್ತಿನಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

"ಉತ್ತರಾಖಂಡದಲ್ಲಿ ನಡೆದ ಪ್ರಾಣಹಾನಿ ತೀವ್ರವಾಗಿ ನೋವು ಕೊಟ್ಟಿದೆ. ರಕ್ಷಣಾ ಕಾರ್ಯಗಳಿಗಾಗಿ ನನ್ನ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡಲು ಬಯಸುತ್ತೇನೆ ಮತ್ತು ಹೆಚ್ಚಿನ ಜನರು ಸಹಾಯ ಮಾಡಿ" ಎಂದು ಪಂತ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಓದಿ : ಹಿಮನದಿ ದುರಂತ; ರಕ್ಷಣಾ ಕಾರ್ಯಾಚರಣೆಗೆ ರಿಷಬ್​ ಪಂತ್​ ಧನಸಹಾಯ

ನಡೆಯುತ್ತಿರುವ ಟೆಸ್ಟ್‌ನ ಮೂರನೇ ದಿನದಂದು ಪಂತ್ 91 ರನ್ ಗಳಿಸಿ ಔಟಗಾವ ಮೂಲಕ ಶತಕ ವಂಚಿತರಾದರು.

ABOUT THE AUTHOR

...view details