ಕರ್ನಾಟಕ

karnataka

ETV Bharat / sports

ಕೊರೊನಾ ಭೀತಿಯಿಂದ ಐಪಿಎಲ್​ ರದ್ದಾಗುವ ಅನುಮಾನ... ತೂಗುಯ್ಯಾಲೆಯಲ್ಲಿ ಧೋನಿ ಭವಿಷ್ಯ! - ಇಂಡಿಯನ್​ ಪ್ರೀಮಿಯರ್​​ ಲೀಗ್​

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಮತ್ತೊಮ್ಮೆ ಕಮ್​ಬ್ಯಾಕ್​ ಮಾಡುವ ಉತ್ಸಾಹದಲ್ಲಿರುವ ಮಹೇಂದ್ರ ಸಿಂಗ್​ ಧೋನಿ ಭವಿಷ್ಯದ ಮೇಲೂ ಇದೀಗ ಕೊರೊನಾ ಕರಿಛಾಯೆ ಭೀರುವ ಸಾಧ್ಯತೆ ದಟ್ಟವಾಗಿದೆ.

MS Dhoni
ಮಹೇಂದ್ರ ಸಿಂಗ್​ ಧೋನಿ

By

Published : Mar 13, 2020, 2:12 PM IST

ಹೈದರಾಬಾದ್​:ಕಳೆದ ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿರುವ ಮಹೇಂದ್ರ ಸಿಂಗ್​ ಧೋನಿ ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅಬ್ಬರಿಸಲು ಸಖತ್​ ತಯಾರಿ ನಡೆಸುತ್ತಿದ್ದಾರೆ. ಆದರೆ ಕೊರೊನಾ ಮಹಾಮಾರಿಯ ಭೀತಿ ಇದರ ಮೇಲೆ ಬಿದ್ದಿರುವ ಕಾರಣ, ಪ್ರಸಕ್ತ ಸಾಲಿನ ಐಪಿಎಲ್​ ನಡೆಯುವುದೇ ಡೌಟ್​ ಎನ್ನಲಾಗುತ್ತಿದೆ.

ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಮೆಂಟ್​ ನಡೆಸಲು ಈಗಾಗಲೇ ಕೆಲವೊಂದು ರಾಜ್ಯಗಳು ಹಿಂದೇಟು ಹಾಕುತ್ತಿದ್ದು, ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಐಪಿಎಲ್​ ನಡೆಸುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಟೂರ್ನಿ ರದ್ಧುಗೊಂಡರೆ ಧೋನಿ ಭವಿಷ್ಯ ಮತ್ತೊಮ್ಮೆ ತೂಗುಯ್ಯಾಲೆಯಲ್ಲಿ ನಿಂತುಕೊಳ್ಳಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಚೀನಾದಲ್ಲಿ ವ್ಯಾಪಕವಾಗಿ ಹರಡಿಕೊಂಡು 4 ಸಾವಿರಕ್ಕೂ ಅಧಿಕ ಜನರ ಬಲಿ ಪಡೆದುಕೊಂಡಿರುವ ಕೊರೊನಾ ಈಗಾಗಲೇ ಭಾರತಕ್ಕೂ ಲಗ್ಗೆ ಹಾಕಿದೆ. ಸುಮಾರು 70 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಒಂದು ವೇಳೆ ಐಪಿಎಲ್​​ ಆಯೋಜನೆ ಮಾಡಿದರೆ ಹೆಚ್ಚಿನ ಜನರಲ್ಲಿ ಮಹಾಮಾರಿ ಹಬ್ಬುವ ಆತಂಕ ವ್ಯಕ್ತಪಡಿಸಲಾಗಿದ್ದು, ಇದೇ ಕಾರಣಕ್ಕಾಗಿ ಇದನ್ನ ಮುಂದೂಡಿಕೆ ಮಾಡಬೇಕು, ಇಲ್ಲವೇ ಬ್ಯಾನ್​ ಮಾಡಬೇಕು ಎಂಬ ಮಾತುಗಳು ಗಂಭೀರವಾಗಿ ಕೇಳಿ ಬರುತ್ತಿವೆ.

ಧೋನಿ ಭವಿಷ್ಯ ತೂಗುಯ್ಯಾಲೆಯಲ್ಲಿ!?

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಖಂಡಿತವಾಗಿ ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂಬ ಮಾತನ್ನ ಈಗಾಗಲೇ ಕೋಚ್​ ಶಾಸ್ತ್ರಿ ಹಾಗೂ ನೂತನ ಆಯ್ಕೆ ಸಮಿತಿ ಹೇಳಿದೆ. ಆದರೆ, ಐಪಿಎಲ್​ ನಡೆಯುವುದೇ ಡೌಟ್​ ಆಗಿರುವುದರಿಂದ ಅವರ ಭವಿಷ್ಯ ಏನು ಎಂಬುದು ಗೊಂದಲವಾಗಿದೆ. ಒಂದು ವೇಳೆ ಅವರಿಗೆ ಕಮ್​ಬ್ಯಾಕ್​ ಮಾಡಲು ಅವಕಾಶ ಸಿಗದೇ ಹೋದರೆ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

2019ರ ವಿಶ್ವಕಪ್​ನಲ್ಲಿ ಕೊನೆಯ ಪಂದ್ಯವನ್ನಾಡಿರುವ ಮಾಹಿ ಅದಾದ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಆಯ್ಕೆ ಸಮಿತಿ ಅವರ ಭವಿಷ್ಯದ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.

ABOUT THE AUTHOR

...view details