ಕರ್ನಾಟಕ

karnataka

ETV Bharat / sports

ಆಯ್ಕೆಯಾಗದಿದ್ದಕ್ಕೆ ಅಸಮಾಧಾನ: ಮಾಜಿ ಕ್ರಿಕೆಟರ್​ ಬಂಡಾರಿ ಮೇಲೆ ಹಲ್ಲೆ, ಇಬ್ಬರ ಸೆರೆ - ದೆಹಲಿ

ತಂಡಕ್ಕೆ ಆಯ್ಕೆಮಾಡಲಿಲ್ಲ ಎಂಬ ಕಾರಣಕ್ಕೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಅಸೋಸಿಯೇಷನ್ ಆಯ್ಕೆ ಸಮಿತಿ ಚೇರ್ಮನ್​ ಅಮಿತ್​ ಬಂಡಾರಿ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ

ಆಯ್ಕೆಯಾಗದಿದ್ದಕ್ಕೆ ಅಸಮಾಧಾನ: ಮಾಜಿ ಕ್ರಿಕೆಟರ್​ ಬಂಡಾರಿ ಮೇಲೆ ಹಲ್ಲೆ, ಇಬ್ಬರ ಸೆರೆ

By

Published : Feb 12, 2019, 10:02 AM IST

Updated : Feb 12, 2019, 12:28 PM IST

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಅಮಿತ್​ ಬಂಡಾರಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ದೆಹಲಿ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ.

ಕ್ರಿಕೆಟರ್​ ಅನುಜ್ ಧೇಡಾ ಮತ್ತು ಆತನ ಸಹೋದರ ನರೇಶ್ ಬಂಧಿತ ಆರೋಪಿಗಳು. ಅಂಡರ್​-23 ತಂಡಕ್ಕೆ ತನ್ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಅನುಜ್ ಧೇಡಾ ಮತ್ತು ಆತನ ಜೊತೆ ಬಂದಿದ್ದ 10 ರಿಂದ 15 ಜನ ಯುವಕರು ದೆಹಲಿ ಹಾಗೂ ಆಯ್ಕೆ ಸಮಿತಿಯ ಜಿಲ್ಲಾ ಕ್ರಿಕೆಟ್​​ನ ಅಸೋಷಿಯೇಷನ್​ ಚೇರ್ಮನ್​​ ಅಮಿತ್​ ಬಂಡಾರಿ ಮೇಲೆ ನಡೆಸಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಿತ್​ ಬಂಡಾರಿ ಅವರನ್ನ ಭೇಟಿ ಮಾಡಿ ಮಾತನಾಡಿದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷ ರಜತ್​ ಶರ್ಮಾ, ಘಟನೆ ಸಂಬಂಧ ದೆಹಲಿ ಪೊಲೀಸ್​ ಕಮಿಷನರ್​ ಜೊತೆ ಮಾತನಾಡಿದ್ದೇನೆ. ಆರೋಪಿಗಳು ಯಾರೇ ಆಗಿದ್ದರು ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ತಿಳಿಸಿದ್ದಾರೆ. ಇನ್ನು ಅಮಿತ್​ ಬಂಡಾರಿ ಆರೋಗ್ಯವಾಗಿದ್ದು, ಶೀಘ್ರದಲ್ಲೆ ಗುಣಮುಖರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆಯನ್ನ ಖಂಡಿಸಿ ಟ್ವೀಟ್​ ಮಾಡಿರುವ ಮಾಜಿ ಕ್ರಿಕೆಟ್​ ಆಟಗಾರ ವಿರೇಂದ್ರ ಸೆಹ್ವಾಗ್​ ಮತ್ತು ಗೌತಮ್​ ಗಂಭೀರ್​ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Last Updated : Feb 12, 2019, 12:28 PM IST

ABOUT THE AUTHOR

...view details