ಕರ್ನಾಟಕ

karnataka

ETV Bharat / sports

ಅಂತೂ ನಿಂತ ಮಳೆರಾಯ: 34 ಓವರ್​ಗಳ ಪಂದ್ಯ... ಡಿಎಲ್​ಎಸ್​ ನಿಯಮದನ್ವಯ ಟಾರ್ಗೆಟ್​ ಫಿಕ್ಸ್​ - ಭಾರತ- ವೆಸ್ಟ್​ ಇಂಡೀಸ್​ ಏಕದಿನ ಕ್ರಿಕೆಟ್​

ಕನ್ನಡಿಗರಾದ ಮನೀಷ್​ ಪಾಂಡೆ ಹಾಗೂ ಕೆಎಲ್​ ರಾಹುಲ್​ ಇಬ್ಬರಿಗೂ ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ಸಿಕ್ಕಿಲ್ಲ. ಧವನ್​ ಏಕದಿನ ತಂಡಕ್ಕೆ ಪುನಾರಾಗಮನ ಮಾಡಿದ್ದು ರಾಹುಲ್​ರನ್ನು ತಂಡದಿಂದ ಕೈಬಿಡಲಾಗಿದೆ.

india toss

By

Published : Aug 8, 2019, 8:58 PM IST

Updated : Aug 8, 2019, 11:21 PM IST

ಗಯಾನ: ಭಾರತದ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಮೊದಲ ಏಕದಿನ ಮೊದಲ ಪಂದ್ಯವನ್ನು ಮಳೆಯ ಕಾರಣದಿಂದ 34 ಓವರ್​ಗಳಿಗೆ ಇಳಿಸಲಾಗಿದೆ.

ಮಳೆಯ ಕಾರಣ ಒಂದೂವರೆ ಗಂಟೆ ತಡವಾಗಿ ಆರಂಭವಾಗಿದ್ದ ಪಂದ್ಯ ಮತ್ತೆ 5 ಓವರ್​ ನಡೆದಿದ್ದ ವೇಳೆ ಆಟ ನಿಲ್ಲಿಸಿತ್ತು. ಇದೀಗ ಮತ್ತೆ ವಿಂಡೀಸ್ ಬ್ಯಾಟಿಂಗ್​ ಮುಂದುವರಿಸಿದ್ದು, ಓವರ್​ಗತಿಯನ್ನು 34ಕ್ಕೆ ಇಳಿಸಲಾಗಿದೆ. ಟಾರ್ಗೆಟ್​ ಅನ್ನು ಡಿಎಲ್​ಎಸ್​ ನಿಯಮಕ್ಕನುಗುಣವಾಗಿ ನಿಗದಿಪಡಿಸಲಾಗುತ್ತದೆ.

ವಿಶ್ವಕಪ್​ನಲ್ಲಿ ಗಾಯಗೊಂಡು ಹೊರಬಿದ್ದಿದ್ದ ಶಿಖರ್​ ಧವನ್​ ಏಕದಿನ ತಂಡಕ್ಕೆ ಮರಳಿದ್ದಾರೆ. ಯುವ ಬ್ಯಾಟ್ಸ್​ಮನ್​ ಶ್ರೇಯಸ್​ ಅಯ್ಯರ್​ ಏಕದಿನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಭಾರತ ತಂಡ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದ್ದು, ಕುಲದೀಪ್​ ಜೊತೆ ಆಲ್​ರೌಂಡರ್​ ರವೀಂದ್ರ ಜಡೇಜಾ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾರತ ತಂಡ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಶ್ರೇಯಸ್ ಐಯ್ಯರ್, ರಿಷಭ್​ ಪಂತ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್

ವೆಸ್ಟ್​ ಇಂಡೀಸ್​

ಇವಿನ್​ ಲೆವಿಸ್​, ಕ್ರಿಸ್​ ಗೇಲ್​, ಶೈ ಹೋಪ್​, ನಿಕೋಲಸ್​ ಪೂರನ್​,​ಶ್ರಿಮ್ರೋನ್​ ಹೆಟ್ಮೈರ್​, ರೋಸ್ಟನ್​ ಚೇಸ್​, ಜಾಸನ್​ ಹೋಲ್ಡರ್​(ನಾಯಕ), ಕಾರ್ಲೋಸ್​ ಬ್ರಾತ್​ವೇಟ್​, ಫ್ಯಾಬಿಯನ್​ ಅಲೆನ್​, ಶೆಲ್ಡಾನ್​ ಕಾಟ್ರೆಲ್​, ಕೆಮರ್​ ರೋಚ್​

Last Updated : Aug 8, 2019, 11:21 PM IST

ABOUT THE AUTHOR

...view details