ಬೆಂಗಳೂರು:ಹಾಲಿ ಚಾಂಪಿಯನ್ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡವನ್ನು 43 ರನ್ಗಳಿಂದ ಮಣಿಸಿ ಶುಭಾರಂಭ ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತದ ನಡುವೆಯೂ ಕೆಎಲ್ ಶ್ರೀಜಿತ್ ಅವರ 48 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 150 ರನ್ಗಳಿಸಿತ್ತು. ಅನುವೃದ್ಧ ಜೋಶಿ 29 ಮತ್ತು ನಾಯಕ ಕರುಣ್ ನಾಯರ್ 27 ರನ್ಗಳಿಸಿದ್ದರು. ಐಪಿಎಲ್ನ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಕೇವಲ 18 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಜಮ್ಮು ಕಾಶ್ಮೀರ ಪರ ನಾಯಕ ಪರ್ವೇಜ್ ರಸೂಲ್ ಮತ್ತು ಆಕಿಬ್ ನಬಿ ತಲಾ 2 ವಿಕೆಟ್ ಪಡೆದರೆ, ಅಬೀದ್ ಮುಷ್ತಾಕ್ ಒಂದು ವಿಕೆಟ್ ಪಡೆದಿದ್ದರು.
151 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಜಮ್ಮು ಕಾಶ್ಮೀರ ತಂಡ ಕರ್ನಾಟಕದ ಬೌಲಿಂಗ್ ದಾಳಿಗೆ ನಲುಗಿ ಕೇವಲ 107 ರನ್ಗಳಿಗೆ ಸರ್ವಪತನ ಹೊಂದಿತು. 30 ರನ್ ಗಳಿಸಿದ ಐಪಿಎಲ್ ಸ್ಟಾರ್ ಅಬ್ದುಲ್ ಸಮದ್ 30 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಕರ್ನಾಟಕ ಪರ ಅಭಿಮನ್ಯು ಮಿಥುನ್ 24ಕ್ಕೆ 2, ಎಂ.ಪ್ರಸಿದ್ಧ್ 34ಕ್ಕೆ 3, ಜೆ.ಸುಚೀತ್ 17ಕ್ಕೆ 2 ಹಾಗೂ ಕೆ. ಗೌತಮ್ 13ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.