ಕರ್ನಾಟಕ

karnataka

By

Published : Jan 28, 2021, 10:48 PM IST

ETV Bharat / sports

ನಾಳೆ ಮುಷ್ತಾಕ್ ಅಲಿ ಸೆಮಿಫೈನಲ್​​: ತಮಿಳುನಾಡಿಗೆ ರಾಜಸ್ಥಾನ್, ಬರೋಡಕ್ಕೆ ಪಂಜಾಬ್ ಸವಾಲು

ಸರ್ದಾರ್​ ಪಟೇಲ್​ ಮೈದಾನದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ನಡೆಯುವ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ಮತ್ತು ರಾಜಸ್ಥಾನ್ ತಂಡ ಎದುರುಬದುರಾಗಲಿವೆ.

ಸಯ್ಯದ್ ಮುಷ್ತಾಕ್ ಅಲಿ ಸೆಮಿಫೈನಲ್
ಸಯ್ಯದ್ ಮುಷ್ತಾಕ್ ಅಲಿ ಸೆಮಿಫೈನಲ್

ಅಹ್ಮದಾಬಾದ್​: ಶುಕ್ರವಾರ ಸಯ್ಯದ್​ ಮುಷ್ತಾಕ್​ ಅಲಿ ಟಿ-20 ಟೂರ್ನಿಯ ಸೆಮಿಫೈನಲ್​​​ ನಡೆಯಲಿದ್ದು, ಬಲಿಷ್ಠ ತಮಿಳುನಾಡು ತಂಡ ಯುವಕರ ತಂಡವಾದ ರಾಜಸ್ಥಾನ್ ಸವಾಲನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಪಂಜಾಬ್​ ತಂಡ ಬರೋಡ ವಿರುದ್ಧ ಸೆಣಸಾಡಲಿದೆ.

ಸರ್ದಾರ್​ ಪಟೇಲ್​ ಮೈದಾನದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ನಡೆಯುವ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ಮತ್ತು ರಾಜಸ್ಥಾನ್ ತಂಡ ಎದುರುಬದುರಾಗಲಿವೆ.

ಲೀಗ್​ನಲ್ಲಿ ಅಜೇಯವಾಗಿದ್ದ ಕಾರ್ತಿಕ್ ಪಡೆ ಕ್ವಾರ್ಟರ್ ಫೈನಲ್​​ನಲ್ಲಿ ​ ಹಿಮಾಚಲ ಪ್ರದೇಶದ ವಿರುದ್ಧ ಬಾಬಾ ಅಪರಾಜಿತ್​ ಸಿಡಿಸಿದ ಅರ್ಧಶತಕದ ನೆರವಿನಿಂದ 5 ವಿಕೆಟ್​ಗಳ ರೋಚಕ ಜಯ ಸಾಧಿಸಿ ಸೆಮಿಸ್​ಗೆ ಪ್ರವೇಶಿಸಿದರೆ, ರಾಜಸ್ಥಾನ ಬಲಿಷ್ಠವಲ್ಲದ ಬಿಹಾರ್​ ಮಣಿಸಿ ಉಪಾಂತ್ಯಕ್ಕೆ ಎಂಟ್ರಿ ಕೊಟ್ಟಿದೆ.

ಸಂಜೆ 6:30ಕ್ಕೆ ನಡೆಯುವ ಮತ್ತೊಂದು ಪಂದ್ಯದಲ್ಲಿ ಬರೋಡ ತಂಡ ಚಾಂಪಿಯನ್ ಕರ್ನಾಟಕಕ್ಕೆ ಸೋಲುಣಿಸಿ ಬಂದಿರುವ ಬಲಿಷ್ಠ ಪಂಜಾಬ್ ತಂಡವನ್ನು ಎದುರಿಸಲಿದೆ.

ಇದನ್ನು ಓದಿ:ಕೊನೆಯ 3 ಎಸೆತದಲ್ಲಿ 15 ರನ್​ ಸಿಡಿಸಿದ ಸೋಲಂಕಿ : ಸೆಮಿಫೈನಲ್​ ಗ್ರ್ಯಾಂಡ್ ಎಂಟ್ರಿಕೊಟ್ಟ ಬರೋಡ!

ಮುಷ್ತಾಕ್ ಅಲಿ ಟಿ20: ಬಿಹಾರ್ ಮಣಿಸಿದ ರಾಜಸ್ಥಾನ್​, ಸೆಮೀಸ್​ನಲ್ಲಿ​ ತಮಿಳುನಾಡು ಎದುರಾಳಿ

ABOUT THE AUTHOR

...view details