ಕರ್ನಾಟಕ

karnataka

By

Published : Oct 28, 2020, 11:30 PM IST

ETV Bharat / sports

ಸೂರ್ಯಕುಮಾರ್ ಅಬ್ಬರ... ಆರ್​ಸಿಬಿ ಮಣಿಸಿ ಪ್ಲೇಆಫ್ ಖಚಿತಪಡಿಸಿಕೊಂಡ ಮುಂಬೈ

ಆರ್​ಸಿಬಿ ನೀಡಿದ್ದ 165 ರನ್​ಗಳ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ಸ್ ಇನ್ನು 5 ಎಸೆತಗಳಿರುವಂತೆ ತಲುಪುವ ಮೂಲಕ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಪಡೆದು ಅಗ್ರಸ್ಥಾನ ಉಳಿಸಿಕೊಂಡಿತಲ್ಲದೆ, ಪ್ಲೇ ಆಫ್​ಗೆ ಎಂಟ್ರಿಕೊಟ್ಟಿತು.

ಪ್ಲೇಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್​
ಸೂರ್ಯಕುಮಾರ್ ಯಾದವ್​

ಅಬುಧಾಬಿ:ಸೂರ್ಯ ಕುಮಾರ್ ಯಾದವ್ ​(79) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ 5 ವಿಕೆಟ್​ಗಳ ಸುಲಭ ಜಯ ಸಾಧಿಸುವ ಮೂಲಕ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ.

ಆರ್​ಸಿಬಿ ನೀಡಿದ್ದ 165 ರನ್​ಗಳ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ಸ್ ಇನ್ನು 5 ಎಸೆತಗಳಿರುವಂತೆ ಗುರಿ ತಲುಪುವ ಮೂಲಕ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಪಡೆದು ಅಗ್ರಸ್ಥಾನ ಉಳಿಸಿಕೊಂಡಿತಲ್ಲದೆ, ಪ್ಲೇ ಆಫ್​ಗೆ ಎಂಟ್ರಿಕೊಟ್ಟಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರ್​ಸಿಬಿ ಬೌಲರ್​ಗಳ ವಿರುದ್ಧ ಪರದಾಡಿದ ಡಿಕಾಕ್ 19 ಎಸೆತಗಳಲ್ಲಿ 18 ರನ್​ಗಳಿಸಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಚಹಾಲ್​ ಬೌಲಿಂಗ್​ನಲ್ಲಿ 19 ಎಸೆತಗಳಲ್ಲಿ 25 ರನ್​ಗಳಿಸಿದ್ದ ಇಶಾನ್ ಕಿಶನ್ ಔಟಾದರು.

ಆದರೆ ಒಂದು ಕಡೆ ವಿಕೆಟ್​ ಬೀಳುತ್ತಿದ್ದರೂ ಸೂರ್ಯಕುಮಾರ್ ಯಾದವ್​ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿಸುತ್ತಿದ್ದರೆ, ಬಂದಂತಹ ಬ್ಯಾಟ್ಸ್​ಮನ್​ಗಳು ವಿಕೆಟ್​ ನೀಡುತ್ತಾ ಪೆವಿಲಿಯನ್​ಗೆ ಮರಳುತ್ತಿದ್ದರು. ಸೌರಭ್ ತಿವಾರಿ 5 ರನ್,​ ಕೃನಾಲ್ ಪಾಂಡ್ಯ 10 ಹಾರ್ದಿಕ್ ಪಾಂಡ್ಯ 17 ರನ್​ಗಳಿಗೆ ವಿಕೆಟ್​ ಒಪ್ಪಿಸಿರು.

ಆದರೆ ಮ್ಯಾಚ್​ ವಿನ್ನಿಂಗ್ ಪ್ರದರ್ಶನ ತೋರಿದ ಯಾದವ್​ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 79 ರನ್​ ಸಿಡಿಸಿ ಅಜೇಯರಾಗಿ ಉಳಿದುಕೊಂಡರು. ತಮ್ಮನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದ ಸೆಲೆಕ್ಟರ್​ಗಳಿಗೆ ತಮ್ಮ ತಾಕತ್ತನ್ನು ಕೊಹ್ಲಿ ಮುಂದೆಯೇ ತೋರಿಸಿಕೊಟ್ಟರು.

ಆರ್​ಸಿಬಿ ಪರ ಯುಜವೇಂದ್ರ ಚಹಾಲ್​ 2, ಮೊಹಮ್ಮದ್ ಸಿರಾಜ್​ 2 ಹಾಗೂ ಕ್ರಿಸ್ ಮೋರಿಸ್​ 1 ವಿಕೆಟ್ ಪಡೆದರು.

ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್​ಸಿಬಿ ದೇವದತ್​ ಅವರ ಅರ್ಧಶತಕದ ಹೊರೆತಾಗಿಯೂ ಬುಮ್ರಾ ಬೌಲಿಂಗ್ ದಾಳಿಗೆ ಸಿಲುಕಿ 164 ರನ್​ಗಳಿಗೆ ಕುಸಿದಿತ್ತು.

ABOUT THE AUTHOR

...view details