ಕರ್ನಾಟಕ

karnataka

ETV Bharat / sports

ವುಮೆನ್ಸ್ ಟಿ20 ಚಾಲೆಂಜ್​: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಸೂಪರ್ ನೋವಾಸ್​ - ಹರ್ಮನ್ ಪ್ರೀತ್ ಕೌರ್

ಉದ್ಘಾಟನಾ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ರೋಚಕ ಸೋಲುಕಂಡಿದ್ದ ಸೂಪರ್​ ನೋವಾಸ್​ ಫೈನಲ್​ ಪ್ರವೇಶಿಸಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ವೆಲಾಸಿಟಿ ಟ್ರೈಲ್​ ಬ್ಲೇಜರ್ಸ್​ ವಿರುದ್ಧ ಹೀನಾಯ ಸೋಲು ಕಂಡಿರುವುದರಿಂದ ಈ ಪಂದ್ಯದಲ್ಲಿ ಸೂಪರ್ ನೋವಾಸ್​ ಗೆದ್ದರೆ ರನ್​ರೇಟ್​ ಆಧಾರದ ಮೇಲೆ ಫೈನಲ್ ಪ್ರವೇಶಿಸಲಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಸೂಪರ್ ನೋವಾಸ್​
ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಸೂಪರ್ ನೋವಾಸ್​

By

Published : Nov 7, 2020, 7:22 PM IST

ಶಾರ್ಜಾ:ವುಮೆನ್ಸ್​ ಟಿ20 ಚಾಲೆಂಜ್​ನ 3ನೇ ಪಂದ್ಯದಲ್ಲಿ ಟ್ರೈಲ್​ಬ್ಲೇಜರ್ಸ್​ ವಿರುದ್ಧ ಟಾಸ್​ ಗೆದ್ದ ಸೂಪರ್ ನೋವಾಸ್ ತಂಡದ ನಾಯಕಿ ಹರ್ಮನ್ ಪ್ರೀತ್​ ಕೌರ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ರೋಚಕ ಸೋಲುಕಂಡಿದ್ದ ಸೂಪರ್​ ನೋವಾಸ್​ ಫೈನಲ್​ ಪ್ರವೇಶಿಸಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ವೆಲಾಸಿಟಿ ಟ್ರೈಲ್​ ಬ್ಲೇಜರ್ಸ್​ ವಿರುದ್ಧ ಹೀನಾಯ ಸೋಲು ಕಂಡಿರುವುದರಿಂದ ಈ ಪಂದ್ಯದಲ್ಲಿ ಸೂಪರ್ ನೋವಾಸ್​ ಗೆದ್ದರೆ ರನ್​ರೇಟ್​ ಆಧಾರದ ಮೇಲೆ ಫೈನಲ್ ಪ್ರವೇಶಿಸಲಿದೆ.

ಇತ್ತ ಮೊದಲ ಪಂದ್ಯದಲ್ಲೇ ಆಲ್​ರೌಂಡರ್ ಪ್ರದರ್ಶನ ತೋರಿ ಗಮನ ಸೆಳಿದಿರುವ ಸ್ಮೃತಿ ಮಂಧಾನ ನೇತೃತ್ವದ ಟ್ರೈಲ್ ಬ್ಲೇಜರ್ಸ್ ತಂಡ ಇಂದಿನ ಪಂದ್ಯದಲ್ಲೂ ಗೆಲ್ಲಲು ಎದುರು ನೋಡುತ್ತಿದೆ. ಈ ಪಂದ್ಯವನ್ನು ಸೋತರು ರನ್​ರೇಟ್​ನಲ್ಲಿ ಸಾಕಷ್ಟು ಮುಂದಿರುವುದರಿಂದ ಸ್ಮೃತಿ ಪಡೆ ಫೈನಲ್ ಪ್ರವೇಶಿಸಿಲಿದೆ.

ಈ ಪಂದ್ಯದಲ್ಲಿಟ್ರೈಲ್ ಬ್ಲೇಜರ್ಸ್​ ಯಾವುದೇ ಬದಲಾವಣೆ ಯಿಲ್ಲದೆ ಕಣಕ್ಕಿಳಿಯುತ್ತಿದ್ದರೆ, ಸೂಪರ್ ನೋವಾಸ್​ ಒಂದು ಬದಲಾವಣೆ ಮಾಡಿಕೊಂಡಿದೆ. ಅನುಭವಿ ಸ್ಪಿನ್ನರ್​ ಅನುಜಾ ಪಾಟೀಲ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ABOUT THE AUTHOR

...view details