ಕರ್ನಾಟಕ

karnataka

ಸಿರಾಜ್​, ಚಹಾಲ್ ಬಿರುಗಾಳಿ: ಕೆಕೆಆರ್ ತಂಡನ್ನು 84 ರನ್​ಗಳಿಗೆ ನಿಯಂತ್ರಿಸಿದ ಆರ್​ಸಿಬಿ

ಮೊಹಮ್ಮದ್ ಸಿರಾಜ್ ಹಾಗೂ ಯುಜವೇಂದ್ರ ಚಹಾಲ್ ಬೌಲಿಂಗ್ ದಾಳಿಯ ನೆರವಿನಿಂದ ಆರ್​ಸಿಬಿ ಎದುರಾಳಿ ಕೋಲ್ಕತ್ತಾ ತಂಡವನ್ನು 84 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

By

Published : Oct 21, 2020, 9:26 PM IST

Published : Oct 21, 2020, 9:26 PM IST

Updated : Oct 21, 2020, 9:34 PM IST

ಕೆಕೆಆರ್ ತಂಡನ್ನು 84 ರನ್​ಗಳಿಗೆ ನಿಯಂತ್ರಿಸಿದ ಆರ್​ಸಿಬಿ
ಕೆಕೆಆರ್ ತಂಡನ್ನು 84 ರನ್​ಗಳಿಗೆ ನಿಯಂತ್ರಿಸಿದ ಆರ್​ಸಿಬಿ

​ಅಬುಧಾಬಿ: ಮೊಹಮ್ಮದ್ ಸಿರಾಜ್ ಹಾಗೂ ಯುಜವೇಂದ್ರ ಚಹಾಲ್ ಪ್ರಚಂಡ ಬೌಲಿಂಗ್ ದಾಳಿಯ ನೆರವಿನಿಂದ ಆರ್​ಸಿಬಿ ಎದುರಾಳಿ ಕೋಲ್ಕತ್ತಾ ತಂಡವನ್ನು ಕೇವಲ 84 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ತಂಡ 4 ಓವರ್​ ಮುಗಿಯುವ ಮುನ್ನವೇ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ತ್ರಿಪಾಠಿ(1), ನಿತೀಶ್ ರಾಣಾ(0) ಟಾಮ್​ ಬಾಂಟನ್(10) ರನ್ನು ಮೊಹಮ್ಮದ್ ಸಿರಾಜ್​ ಔಟ್ ಮಾಡಿದರೆ, ಗಿಲ್​(1) ರನ್ನು ಸೈನಿ ಔಟ್ ಮಾಡಿದರು.

ನಂತರ ಬಂದ ಕಾರ್ತಿಕ್ 14 ಎಸೆತಗಳೆನ್ನುದುರಿಸಿ ಚಹಾಲ್ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಪ್ಯಾಟ್​ ಕಮ್ಮಿನ್ಸ್ ಕೂಡ​ 17 ಎಸೆತಳಲ್ಲಿ ಕೇವಲ 4 ರನ್​ಗಳಿಸಿ ಚಹಾಲ್​ಗೆ ವಿಕೆಟ್ 2ನೇ ಬಲಿಯಾದರು. ವಿಕೆಟ್ ಬೀಳುತ್ತಿದ್ದರು ಕ್ರೀಸ್​ ಕಚ್ಚಿನಿಂತ ನಾಯಕ ಮಾರ್ಗನ್ 34 ಎಸೆತಗಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 30 ರನ್​ಗಳಿಸಿ ವಾಷಿಂಗ್ಟನ್ ಸುಂದರ್​ ಓವರ್​ನಲ್ಲಿ ಗುರುಕಿರಾತ್ ಮನ್ ಹಿಡಿದ ಕ್ಯಾಚ್​ಗೆ ಬಲಿಯಾದರು.

ಲೂಕಿ ಫರ್ಗ್ಯುಸನ್ (19) ಹಾಗೂ ಕುಲ್ದೀಪ್ ಯಾದವ್ (12)​ 8ನೇ ವಿಕೆಟ್​ಗೆ 27 ರನ್​ ಸೇರಿಸಿದರು. ಒಟ್ಟಾರೆ ಕೆಕೆಆರ್​ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್​ಳಿಸಿತು.

ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಸಿರಾಜ್ 4 ಓವರ್​ಗಳಲ್ಲಿ 2 ಮೇಡನ್ ಸಹಿತ ಕೇವಲ 8 ರನ್​ ನೀಡಿ 3 ವಿಕೆಟ್ ಪಡೆದರೆ, ಚಹಾಲ್ 15 ರನ್​ ನೀಡಿ 2 ವಿಕೆಟ್, ಸೈನಿ 23 ರನ್​ ನೀಡಿ 1 ಹಾಗೂ ಸುಂದರ್ 14 ರನ್​ ನೀಡಿ 1 ವಿಕೆಟ್ ಪಡೆದು ಕೆಕೆಆರ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು

Last Updated : Oct 21, 2020, 9:34 PM IST

ABOUT THE AUTHOR

...view details