ಮೊಹಾಲಿ: ಇಲ್ಲಿನ ಎಎಸ್ ಬಿಂದ್ರಾ ಮೈದಾನದಲ್ಲಿ ದೆಹಲಿ ಹಾಗೂ ಪಂಜಾಬ್ ತಂಡದ ನಡುವೆ ರಣಜಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಪಂಜಾಬ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ರೂ ಮೈದಾನ ತೊರೆಯದ ಘಟನೆ ನಡೆದಿದೆ.
ಪಂದ್ಯ ನಡೆಯುತ್ತಿದ್ದ ವೇಳೆ ದೆಹಲಿ ತಂಡದ ಮಧ್ಯಮ ವೇಗಿ ಸಭೋತ್ ಬಾಟಿ ಬೌಲಿಂಗ್ನಲ್ಲಿ ಶುಭಮನ್ ಗಿಲ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ದೆಹಲಿ ತಂಡದ ಪ್ಲೇಯರ್ಸ್ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರೆ, ಗಿಲ್ ಮಾತ್ರ ಮೈದಾನ ಬಿಟ್ಟು ಹೊರಗಡೆ ನಡೆದಿಲ್ಲ. ಈ ವೇಳೆ ತಾವು ಔಟ್ ಆಗಿಲ್ಲ ಎಂದಿದ್ದಾರೆ. ಈ ವೇಳೆ ಅಂಪೈರ್ ರೆಫ್ರಿ ಜತೆ ಮಾತುಕತೆ ನಡೆಸಿ, ಔಟ್ ಇಲ್ಲ ಎಂದು ಮರುತೀರ್ಪು ನೀಡಿದ್ದಾರೆ.