ಕರ್ನಾಟಕ

karnataka

ETV Bharat / sports

ಅಂಪೈರ್​ ಔಟ್​ ನೀಡಿದ್ರೂ ಮೈದಾನ ತೊರೆಯದ ಗಿಲ್​​... ಗ್ರೌಂಡ್​​ನಿಂದಲೇ ಹೊರನಡೆದ ಡೆಲ್ಲಿ ಪ್ಲೇಯರ್ಸ್​! - ರಣಜಿ ಕ್ರಿಕೆಟ್​​ನಲ್ಲಿ ಶುಭಮನ್ ಗಿಲ್​

ದೆಹಲಿ ಹಾಗೂ ಪಂಜಾಬ್​ ತಂಡದ ನಡುವಿನ ರಣಜಿ ಕ್ರಿಕೆಟ್​ ಪಂದ್ಯದಲ್ಲಿ ಉದಯೋನ್ಮುಖ ಬ್ಯಾಟ್ಸ್​​ಮನ್​ ಶುಭಮನ್​ ಗಿಲ್​​ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿರುವ ಘಟನೆ ನಡೆದಿದೆ.

Shubhman Gill
ಶುಭಮನ್​ ಗಿಲ್

By

Published : Jan 3, 2020, 4:13 PM IST

ಮೊಹಾಲಿ: ಇಲ್ಲಿನ ಎಎಸ್​ ಬಿಂದ್ರಾ ಮೈದಾನದಲ್ಲಿ ದೆಹಲಿ ಹಾಗೂ ಪಂಜಾಬ್​ ತಂಡದ ನಡುವೆ ರಣಜಿ ಕ್ರಿಕೆಟ್​ ಪಂದ್ಯ ನಡೆಯುತ್ತಿದ್ದು, ಪಂಜಾಬ್​ ತಂಡದ ಆರಂಭಿಕ ಆಟಗಾರ ಶುಭಮನ್​ ಗಿಲ್​ ಔಟ್​ ಎಂದು ಅಂಪೈರ್​ ತೀರ್ಪು ನೀಡಿದ್ರೂ ಮೈದಾನ ತೊರೆಯದ ಘಟನೆ ನಡೆದಿದೆ.

ಪಂದ್ಯ ನಡೆಯುತ್ತಿದ್ದ ವೇಳೆ ದೆಹಲಿ ತಂಡದ ಮಧ್ಯಮ ವೇಗಿ ಸಭೋತ್​ ಬಾಟಿ ಬೌಲಿಂಗ್​​ನಲ್ಲಿ ಶುಭಮನ್​ ಗಿಲ್​ ಔಟ್​ ಎಂದು ಅಂಪೈರ್​ ತೀರ್ಪು ನೀಡಿದ್ದಾರೆ. ಈ ವೇಳೆ ದೆಹಲಿ ತಂಡದ ಪ್ಲೇಯರ್ಸ್​ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರೆ, ಗಿಲ್​ ಮಾತ್ರ ಮೈದಾನ ಬಿಟ್ಟು ಹೊರಗಡೆ ನಡೆದಿಲ್ಲ. ಈ ವೇಳೆ ತಾವು ಔಟ್​ ಆಗಿಲ್ಲ ಎಂದಿದ್ದಾರೆ. ಈ ವೇಳೆ ಅಂಪೈರ್​ ರೆಫ್ರಿ ಜತೆ ಮಾತುಕತೆ ನಡೆಸಿ, ಔಟ್​ ಇಲ್ಲ ಎಂದು ಮರುತೀರ್ಪು ನೀಡಿದ್ದಾರೆ.

ಇದರಿಂದ ಅಸಮಾಧಾನಗೊಂಡ ದೆಹಲಿ ಪ್ಲೇಯರ್ಸ್​​​ ಪಂದ್ಯ ಆಡುವುದು ಬಿಟ್ಟು ಮೈದಾನದಿಂದ ಹೊರಗಡೆ ನಡೆದಿದ್ದಾರೆ. ಹೀಗಾಗಿ 10 ನಿಮಿಷಕ್ಕೂ ಹೆಚ್ಚು ಕಾಲ ಪಂದ್ಯ ಸ್ಥಗಿತಗೊಂಡಿದೆ. ಆದರೆ ಮ್ಯಾಚ್​ ರೆಫ್ರಿ ಮಧ್ಯಪ್ರವೇಶ ಮಾಡಿದ್ದರಿಂದ ಪುನಃ ಪಂದ್ಯ ಆರಂಭಗೊಂಡಿದೆ. ಈ ವೇಳೆ ಬ್ಯಾಟ್​ ಮಾಡಲು ಮೈದಾನಕ್ಕೆ ಇಳಿದ ಗಿಲ್​ 43 ಎಸೆತಗಳಲ್ಲಿ 23ರನ್​ಗಳಿಕೆ ಮಾಡಿ ಸಿಮಾರ್​​ಜೀತ್​ ಸಿಂಗ್​ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದ್ದಾರೆ.

ಇನ್ನು ಅಂಪೈರ್​ ತೀರ್ಪಿನ ವಿರುದ್ಧ ಶುಭಮನ್​ ಗಿಲ್​ ಆಕ್ರೋಶಗೊಂಡು ಅವರಿಗೆ ಅಸಭ್ಯ ಭಾಷೆ ಬಳಕೆ ಮಾಡಿ ಬೈದಿದ್ದಾರೆ ಎಂದು ದೆಹಲಿ ತಂಡದ ಪ್ಲೇಯರ್ಸ್​ ಆರೋಪ ಮಾಡಿದ್ದಾರೆ. ಗಿಲ್​ ಟೀಂ ಇಂಡಿಯಾ ಪರ ಎರಡು ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

...view details