ಕರ್ನಾಟಕ

karnataka

ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರಬಂದ ಶ್ರೇಯಸ್​ ಅಯ್ಯರ್

By

Published : Mar 23, 2021, 9:27 PM IST

Updated : Mar 25, 2021, 4:38 PM IST

8ನೇ ಓವರ್​ನಲ್ಲಿ ಜಾನಿ ಬೈರ್ಸ್ಟೋವ್​ ಬಾರಿಸಿದ ಚೆಂಡನ್ನು ತಡೆಯಲು ಓಡಿದ ಶ್ರೇಯಸ್​ ಬೌಂಡರಿ ತಡೆಯುವಲ್ಲಿ ಯಶಸ್ವಿಯಾದರು. ಅವರು ತಂಡಕ್ಕೆ 2 ರನ್​ ಉಳಿಸಿದರಾದರೂ ಡೈವ್ ಮಾಡಿದಾಗ ಅವರ ಬಲ ಭುಜ ನೋವಿಗೆ ತುತ್ತಾಗಿ ಮೈದಾನದಿಂದ ಫಿಸಿಯೋ ಜೊತೆಗೆ ಹೊರ ಹೋದರು. ಅವರ ಬದಲಿಗೆ ಶುಬ್ಮನ್ ಗಿಲ್​​ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ.

ಶ್ರೇಯಸ್​ ಅಯ್ಯರ್​ಗೆ ಗಾಯ
ಶ್ರೇಯಸ್​ ಅಯ್ಯರ್​ಗೆ ಗಾಯ

ಪುಣೆ:ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ವೇಳೆ ಭುಜದ ನೋವಿನಿಂದ ಬಳಲಿದ್ದು, ಮೈದಾನದಿಂದ ಹೊರಬಂದಿದ್ದಾರೆ.

8ನೇ ಓವರ್​ನಲ್ಲಿ ಜಾನಿ ಬೈರ್ಸ್ಟೋವ್​ ಬಾರಿಸಿದ ಚೆಂಡನ್ನು ತಡೆಯಲು ಓಡಿದ ಶ್ರೇಯಸ್​ ಬೌಂಡರಿ ತಡೆಯುವಲ್ಲಿ ಯಶಸ್ವಿಯಾದರು. ಅವರು ತಂಡಕ್ಕೆ 2 ರನ್​ ಉಳಿಸಿದರಾದರೂ ಡೈವ್ ಮಾಡಿದಾಗ ಅವರ ಬಲ ಭುಜ ನೋವಿಗೆ ತುತ್ತಾಗಿ ಮೈದಾನದಿಂದ ಫಿಸಿಯೋ ಜೊತೆಗೆ ಹೊರ ಹೋದರು. ಅವರ ಬದಲಿಗೆ ಶುಬ್ಮನ್ ಗಿಲ್​​ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, 8ನೇ ಓವರ್​ನಲ್ಲಿ ಶ್ರೇಯಸ್ ಬೌಂಡರಿ ತಡೆಯುವ ಯತ್ನದಲ್ಲಿ ಎಡ ಭುಜದ ನೋವಿಗೆ (ಸಬ್ಲಕ್ಸೇಟೆಡ್) ಒಳಗಾಗಿದ್ದು, ಅವರನ್ನು ಸ್ಕ್ಯಾನ್​ಗಾಗಿ ಕಳುಹಿಸಲಾಗಿದೆ. ಅವರು ಈ ಪಂದ್ಯದ ಮುಂದಿನ ಭಾಗದಲ್ಲಿ ಲಭ್ಯರಿರುವುದಿಲ್ಲ ಎಂದು ಟ್ವೀಟ್ ಮಾಡಿದೆ.

ಇನ್ನು ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ವೇಳೆ ಮೊಣ ಕ್ಕೈಗೆ ಚೆಂಡು ಬಡಿದಿರುವುದರಿಂದ ನೋವು ಕಾಣಿಸಿಕೊಂಡಿದ್ದು, ಅವರೂ ಕೂಡ ಫೀಲ್ಡಿಂಗ್ ವೇಳೆ ಮೈದಾನಕ್ಕೆ ಆಗಮಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಸೂರ್ಯಕುಮಾರ್ ಯಾದವ್​ ರೋಹಿತ್ ಬದಲು ಫೀಲ್ಡಿಂಗ್ ಮಾಡುತ್ತಿದ್ದಾರೆ.

ಇದನ್ನು ಓದಿ: ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕೃನಾಲ್ ಪಾಂಡ್ಯ

Last Updated : Mar 25, 2021, 4:38 PM IST

ABOUT THE AUTHOR

...view details