ಕರಾಚಿ: ಬರೋಬ್ಬರಿ 16 ವರ್ಷಗಳ ಬಳಿಕ ಪಾಕ್ ಕ್ರಿಕೆಟ್ ತಂಡದ ವೇಗದ ಬೌಲರ್ ಶೊಯೆಬ್ ಅಖ್ತರ್ 2003ರ ವಿಶ್ವಕಪ್ ಕುರಿತಾದ ರಹಸ್ಯವೊಂದನ್ನ ಹೊರಹಾಕಿದ್ದಾರೆ. ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ತಾವು ಸೋಲು ಕಾಣಲು ಏನು ಕಾರಣ ಎಂಬ ಮಾಹಿತಿಯನ್ನ ಇದೀಗ ರಿವೀಲ್ ಮಾಡಿದ್ದಾರೆ.
2003ರ ಮಾರ್ಚ್ 1ರಂದು ದಕ್ಷಿಣ ಆಫ್ರಿಕಾದ ಸೆಂಚೂರಿಯನ್ನಲ್ಲಿ ನಡೆದಿದ್ದ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕ್ ಭಾರತದ ವಿರುದ್ಧ 6ವಿಕೆಟ್ಗಳ ಸೋಲು ಕಂಡಿತ್ತು. ಮೊದಲು ಬ್ಯಾಟ್ ಮಾಡಿದ ಪಾಕ್ ಟೀಂ ಇಂಡಿಯಾ ಗೆಲುವಿಗೆ 274ರನ್ ಟಾರ್ಗೆಟ್ ನೀಡಿತ್ತು. ಆ ವೇಳೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ಪಾಕ್ ಟೀಂ ಇಂಡಿಯಾ ತಂಡವನ್ನ ಕಟ್ಟುಹಾಕುವಲ್ಲಿ ವಿಫಲಗೊಂಡಿತ್ತು. ಈ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 98ರನ್ಗಳಿಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು.
ವಖಾರ್ ಯೂನಿಸ್/Waqar Younis ಈ ಬಗ್ಗೆ ಇದೀಗ ತಮ್ಮದೇ ಯೂಟ್ಯೂಬ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಶೊಯೆಬ್, ಪಂದ್ಯ ಆರಂಭಗೊಳ್ಳುವುದಕ್ಕೂ ಹಿಂದಿನ ರಾತ್ರಿ ಎಡ ಮೊಣಕಾಲಿಗೆ 4-5 ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಿತ್ತು. ಆ ವೇಳೆ, ನಾನು ಫಿಟ್ನೆಸ್ ತೊಂದರೆಯಿಂದ ಬಳಲುತ್ತಿದೆ. ಮೊಣಕಾಲಿನಲ್ಲಿ ನೀರು ಸಹ ತುಂಬಿಕೊಂಡಿತ್ತು. ಬೌಲಿಂಗ್ ಆರಂಭ ಮಾಡುವುದಕ್ಕೂ ಮುಂಚಿತವಾಗಿ ನಾನು ಇದರ ಬಗ್ಗೆ ತಂಡದ ಆಟಗಾರರಿಗೆ ಹೇಳಿದ್ದೆ. ಆದರೆ, ಟೀಂ ಇಂಡಿಯಾವನ್ನ ನಾವು 270 ರನ್ವೊಳಗೆ ಕಟ್ಟಿಹಾಕಬಹುದು ಎಂಬ ಮಾತುಗಳನ್ನ ಸಹ ಆಟಗಾರರು ಹೇಳಿದ್ದರು. ಆದರೆ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಚಿನ್,ಸೆಹ್ವಾಗ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದು ಹೇಳಿದರು.
ಇದೇ ವೇಳೆ, ವಕಾರ್ ಯೂನಿಸ್ ಕೂಡ ಕಳಪೆ ನಾಯಕತ್ವ ನಿರ್ವಹಣೆ ಮಾಡಿದ್ದರು. ಅದು ಕೂಡ ನಮ್ಮ ತಂಡದ ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ ಅಖ್ತರ್ 98ರನ್ಗಳಿಕೆ ಮಾಡಿದ್ದ ಸಚಿನ್ ವಿಕೆಟ್ ಪಡೆದುಕೊಂಡು 72ರನ್ ನೀಡಿದ್ದರು.