ಕರ್ನಾಟಕ

karnataka

ETV Bharat / sports

ಸೆಪ್ಟೆಂಬರ್ 19ರಂದು ಟಾಸ್​ ವೇಳೆ ಸಿಗೋಣ: ಹಿಟ್​ಮ್ಯಾನ್ ಟ್ವೀಟ್​

ಮಹೇಂದ್ರ ಸಿಂಗ್​ ಧೋನಿ ಹಾಗೂ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಹಿಟ್​ಮ್ಯಾನ್ ರೋಹಿತ್​ ಶರ್ಮಾ ಟ್ವೀಟ್ ಮಾಡಿದ್ದಾರೆ.

By

Published : Aug 16, 2020, 11:22 AM IST

Rohit Sharma tweet
ರೋಹಿತ್ ಶರ್ಮ ಟ್ವೀಟ್​

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಟೀಂ ಇಂಡಿಯಾದ ಉಪನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮ​ ಟ್ವೀಟ್ ಮಾಡಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ರೋಹಿತ್,​ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿತ್ತು. ಒಂದು ತಂಡವನ್ನು ಕಟ್ಟುವುದು ಹೇಗೆ?, ಅದನ್ನು ನಿರ್ವಹಿಸುವುದು ಹೇಗೆ? ಎಂಬುದನ್ನು ಅವರು ಚೆನ್ನಾಗಿ ತಿಳಿದುಕೊಂಡಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ತಂಡದಲ್ಲಿ ಅವರನ್ನು ಖಂಡಿತಾ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಆದರೆ ಐಪಿಎಲ್​​ನಲ್ಲಿ ಅವರಿದ್ದಾರೆ. ಸೆಪ್ಟೆಂಬರ್ 19ರಂದು ಟಾಸ್​ನಲ್ಲಿ ಭೇಟಿಯಾಗೋಣ ಎಂದು ರೋಹಿತ್​ ಶರ್ಮ ಟ್ವೀಟ್ ಮಾಡಿದ್ದಾರೆ.

ಧೋನಿ ಜೊತೆಗೆ ನಿವೃತ್ತಿ ಘೋಷಿಸಿರುವ ಸುರೇಶ್ ರೈನಾ ಕುರಿತು ಟ್ವೀಟ್ ಮಾಡಿರುವುದು ಸ್ವಲ್ಪ ಆಘಾತವಾಗಿದೆ. ಆದರೂ ನಿವೃತ್ತಿ ನಂತರದ ಅವರ ಕ್ರಿಕೆಟ್​ ಜೀವನ ಸುಗಮವಾಗಿರಲಿ ಎಂದು ಹಾರೈಸಿದ್ದಾರೆ.

ABOUT THE AUTHOR

...view details