ಕರ್ನಾಟಕ

karnataka

By

Published : May 25, 2020, 4:03 PM IST

ETV Bharat / sports

ಸಚಿನ್​ 13 ವರ್ಷಗಳ ಹಿಂದೆ ಮಾಡಿದ್ದ ಸಹಾಯ ನೆನೆದು ಧನ್ಯವಾದ ಹೇಳಿದ ಬಾಂಗ್ಲಾ ಕ್ರಿಕೆಟಿಗ

ಸಚಿನ್​ ತೆಂಡೂಲ್ಕರ್ ಸಾವಿರಾರು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ವಿರೋಧಿ ತಂಡದ ಆಟಗಾರರೂ ಕೂಡ ಸಚಿನ್​ ನಡತೆಯನ್ನು ಕಂಡು ಗೌರವ ನೀಡುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಢಾಕಾ: ಬಾಂಗ್ಲಾದೇಶದ ಟಿ-20 ತಂಡದ ನಾಯಕ ಮಹ್ಮದುಲ್ಲಾ, ಸಚಿನ್ ತೆಂಡೂಲ್ಕರ್​​ 13 ವರ್ಷಗಳ ಹಿಂದೆ ಮಾಡಿದ ಸಹಾಯವನ್ನು ನೆನೆದು ಧನ್ಯವಾದ ತಿಳಿಸಿದ್ದಾರೆ.

ವಿಶ್ವೆದೆಲ್ಲೆಡೆ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಸಚಿನ್​ ತೆಂಡೂಲ್ಕರ್ ವಿಶ್ವದ ಗ್ರೇಟೆಸ್ಟ್​ ಬ್ಯಾಟ್ಸ್​​ಮನ್​. ಕ್ರಿಕೆಟ್​ ಹೊರತಾಗಿಯೂ ಮಾನವೀಯ ಮೌಲ್ಯವುಳ್ಳ ವ್ಯಕ್ತಿ ಕೂಡ ಆಗಿದ್ದಾರೆ. ಕ್ರಿಕೆಟ್​ ದೇವರು ಎಂದೇ ಖ್ಯಾತರಾಗಿರುವ ಸಚಿನ್​ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರರ್​ ಆಗಿದ್ದಾರೆ.

ಬಾಂಗ್ಲಾದೇಶದ ಟಿ-20 ತಂಡದ ನಾಯಕ ಮಹ್ಮದುಲ್ಲಾ

ಸಚಿನ್​ ತೆಂಡೂಲ್ಕರ್ ಸಾವಿರಾರು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ವಿರೋಧಿ ತಂಡದ ಆಟಗಾರರೂ ಕೂಡ ಸಚಿನ್​ ನಡತೆಯನ್ನು ಕಂಡು ಗೌರವ ನೀಡುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಇತ್ತೀಚೆಗೆ ಬಾಂಗ್ಲಾದೇಶದ ಟಿ-20 ತಂಡದ ನಾಯಕ ಮಹ್ಮದುಲ್ಲಾ ರಿಯಾದ್​ ಸಚಿನ್​ ಮಾಡಿದ್ದ ಸಹಾಯವನ್ನು ನೆನೆದಿದ್ದಾರೆ. ಕ್ರಿಕ್​ಬಜ್​ ನಡೆಸಿದ ಆನ್​ಲೈನ್​ ಸಂವಾದದಲ್ಲಿ ಅಡಿಡಾಸ್ ಕಂಪನಿಯಿಂದ ಬ್ಯಾಟ್​ ಸ್ಪಾನ್ಸರ್​ಶಿಪ್​ ಕೊಡಿಸಿದ್ದ ವಿಚಾರವನ್ನು ಮಹ್ಮದುಲ್ಲಾ ನೆನೆದು ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.

ಬ್ಯಾಟ್ ಇಲ್ಲದೆ ಪರದಾಡುತ್ತಿದ್ದ ನನಗೆ ಸಚಿನ್​ ಅಡಿಡಾಸ್​ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಟ್ಟು ಬ್ಯಾಟ್​ ಸ್ಪಾನ್ಸರ್​ ಕೊಡಿಸಿದ್ದರು. ಅವರ ಗುಣಕ್ಕೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲುವುದಿಲ್ಲ ಎಂದಿದ್ದಾರೆ.

ಮಹ್ಮದುಲ್ಲಾ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ ಬಹುದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ. ಧೋನಿ ನನ್ನ ಕ್ರಿಕೆಟ್​ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರ ಆಟವನ್ನು ಟಿವಿಯಲ್ಲಿ ನೋಡುತ್ತಿರುತ್ತೇನೆ. ಕೆಲವೊಮ್ಮೆ ಲೈವ್​ನಲ್ಲೂ ನೋಡಿದ್ದೇನೆ. ಏಕದಿನ ಕ್ರಿಕೆಟ್​ನಲ್ಲಿ 50 ಸರಾಸರಿ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಅವರಿಂದ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details