ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಸೇರಿಕೊಳ್ಳಲು ಶ್ರೀಶಾಂತ್ ತವಕ: ಬೌಲಿಂಗ್‌ ವೇಳೆ ಸಚಿನ್‌ ಕ್ಲೀನ್ ಬೌಲ್ಡ್! - ಐಪಿಎಲ್​ ಸ್ಪಾಟ್​ ಫಿಕ್ಸಿಂಗ್​​​​

ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಟೀಂ ಇಂಡಿಯಾ ವೇಗಿ ಎಸ್​​ ಶ್ರೀಶಾಂತ್ ಅವರಿಗೆ​ ಇದೀಗ ರಾಷ್ಟ್ರೀಯ ತಂಡ ಸೇರಿಕೊಳ್ಳುವ ತವಕವಿದೆ. ಇದಕ್ಕಾಗಿ ಅವರು ಕಠಿಣ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಎಸ್​ ಶ್ರೀಶಾಂತ್​​

By

Published : Oct 26, 2019, 9:53 AM IST

ಕೊಚ್ಚಿ:ಭಾರತದ ವಿವಾದಿತ ಬೌಲರ್​ ಎಸ್.​ ಶ್ರೀಶಾಂತ್​ ಕ್ರಿಕೆಟ್​ಗೆ ಮತ್ತೊಮ್ಮೆ ಕಮ್​ಬ್ಯಾಕ್​ ಮಾಡಲು ನೆಟ್​​ನಲ್ಲಿ ಬೆವರು ಹರಿಸುತ್ತಿದ್ದಾರೆ. ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್​ ಪ್ರ್ಯಾಕ್ಟಿಸ್​ ಮಾಡುತ್ತಿರುವ ಅವರಲ್ಲಿ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಉತ್ಕಟ ಬಯಕೆ ಎದ್ದು ಕಾಣುತ್ತಿದೆ.

ಇಂಡಿಯನ್​ ಪ್ರೀಮಿಯರ್ ಲೀಗ್​ ಹಾಗೂ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶ್ರೀಶಾಂತ್​ ನೆಟ್​​ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೊಚ್ಚಿಯ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರು ಕೇರಳ ರಣಜಿ ತಂಡದ ಕ್ಯಾಪ್ಟನ್​ ಸಚಿನ್​ ಬೇಬಿ ಅವರನ್ನು ಕ್ಲೀನ್​ ಬೋಲ್ಡ್​ ಮಾಡಿ ಗಮನ ಸೆಳೆದರು.

2013ರಲ್ಲಿ ನಡೆದ ಐಪಿಎಲ್‌​​​ ಸ್ಪಾಟ್​ ಫಿಕ್ಸಿಂಗ್​ ಆರೋಪದಲ್ಲಿ ಭಾಗಿಯಾಗಿದ್ದ ಕಾರಣ ಅವರ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ನಿಷೇಧವನ್ನು ಬಿಸಿಸಿಐ 7 ವರ್ಷಕ್ಕೆ ಕಡಿತಗೊಳಿಸಿತ್ತು. ಹೀಗಾಗಿ ಈಗಾಗಲೇ 6 ವರ್ಷ ಕ್ರಿಕೆಟ್ 'ಅಜ್ಞಾತವಾಸ'ದಲ್ಲಿ ಶ್ರೀಶಾಂತ್ ಕಳೆದಿದ್ದು ಮುಂದಿನ ವರ್ಷ ನಿಷೇಧ ಅವಧಿ ಕೊನೆಗೊಳ್ಳಲಿದೆ.

36 ವರ್ಷದ ಶ್ರೀಶಾಂತ್​ ಅವರನ್ನು ಐಪಿಎಲ್​​ನಲ್ಲಿ ಫ್ರಾಂಚೈಸಿಗಳು ಖರೀದಿಸುವ ಸಾಧ್ಯತೆ ಕಡಿಮೆ ಇದೆ. ಆದರೆ ದೇಶೀಯ ಟೂರ್ನಿ ಹಾಗೂ ವಿದೇಶಗಳಲ್ಲಿ ನಡೆಯುವ ಕ್ರಿಕೆಟ್​​ನಲ್ಲಿ ಅವರು ಭಾಗಿಯಾಗಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಿದ್ದಾರೆ.

ABOUT THE AUTHOR

...view details