ಕರ್ನಾಟಕ

karnataka

By

Published : Jan 18, 2020, 9:48 AM IST

ETV Bharat / sports

ರೋಹಿತ್ ಶರ್ಮಾ ಭುಜಕ್ಕೆ ಪೆಟ್ಟು.. ಮೂರನೇ ಏಕದಿನ ಪಂದ್ಯಕ್ಕೆ ಹಿಟ್​ಮ್ಯಾನ್ ಲಭ್ಯ!

ಆಸೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಗಾಯಗೊಂಡಿರುವ ರೋಹಿತ್, ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

Rohit should be back for Bengaluru ODI,ರೋಹಿತ್ ಶರ್ಮಾ ಭುಜಕ್ಕೆ ಪೆಟ್ಟು.
ರೋಹಿತ್ ಶರ್ಮಾ ಭುಜಕ್ಕೆ ಪೆಟ್ಟು.

ರಾಜ್​ಕೋಟ್(ಗುಜರಾತ್):ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮೂರನೇ ಏಕದಿನ ಪಂದ್ಯವನ್ನ ಆಡಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 36 ರನ್​ಗಳ ಜಯ ದಾಖಲಿಸಿದೆ. ಪಂದ್ಯದ ವೇಳೆ 43ನೇ ಓವರ್​ನಲ್ಲಿ ಬೌಂಡರಿ ಗೆರೆ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ರೋಹಿತ್, ಚೆಂಡು ಹಿಡಿಯುವ ವೇಳೆ ಎಡ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು.

ರೋಹಿತ್ ಶರ್ಮಾ ಭುಜಕ್ಕೆ ಪೆಟ್ಟು

ಪಂದ್ಯದ ನಂತರ ರೋಹಿತ್ ಶರ್ಮಾ ಜೊತೆ ಮಾತನಾಡಿದ್ದೇನೆ. ಎಡ ಭುಜಕ್ಕೆ ಪೆಟ್ಟಾಗಿದ್ದು, ಅಷ್ಟೊಂದು ಗಂಭೀರ ಗಾಯವೇನು ಆಗಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ರೋಹಿತ್ ಲಭ್ಯವಾಗಲಿದ್ದಾರೆ ಎಂದು ವಿರಾಟ್ ಹೇಳಿದ್ದಾರೆ. ಏರಡನೇ ಏಕದಿನ ಪಂದ್ಯದಲ್ಲಿ 42 ರನ್​ ಸಿಡಿಸಿದ್ದ ರೋಹಿತ್ ಶರ್ಮಾ, ಆ್ಯಡಂ ಜಂಪಾ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದಿದ್ದರು.

ABOUT THE AUTHOR

...view details