ಮುಂಬೈ: ಕರ್ನಾಟಕದ ಕೊಡಗಿನ ವೀರ ರಾಬಿನ್ ಉತ್ತಪ್ಪ ಪ್ರಸ್ತುತ ವರ್ಷದಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಪಂದ್ಯಕ್ಕೆ ಕೇರಳ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡದಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಸೌರಾಷ್ಟ್ರ ಪರ ಆಡಿದ್ದ ಉತ್ತಪ್ಪ, ಪ್ರಸ್ತುತ ವರ್ಷದಿಂದ ಕೇರಳ ತಂಡದಲ್ಲಿ ಆಡಲು ನಿರ್ಧರಿಸಿದ್ದಾರೆ. ಅಲ್ಲದೆ ಕೇರಳ ತಂಡಕ್ಕೆ ಸೇರುತ್ತಿದ್ದಂತೆ ಸೀಮಿತ ಓವರ್ಗಳ ಟ್ರೋಫಿಗಳಾದ ವಿಜಯ್ ಹಜಾರೆ, ಸಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಕೇರಳ ತಂಡವನ್ನು ಉತ್ತಪ್ಪ ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶ್ರೀಜಿತ್ ವಿ. ನಾಯರ್ ತಿಳಿಸಿದ್ದಾರೆ.