ಕರ್ನಾಟಕ

karnataka

ETV Bharat / sports

ಶಿಖರ್​ ಸ್ಥಾನದಲ್ಲಿ ಅವಕಾಶ ಪಡೆದುಕೊಂಡರೂ, ಆಡುವ 11ರಲ್ಲಿ ರಿಷಭ್​​​​ಗೆ​ ಚಾನ್ಸ್​ ಸುಲಭವಲ್ಲ!

ಹೆಬ್ಬೆರಳಿನ ಗಾಯಕ್ಕೊಳಗಾಗಿ ವಿಶ್ವಕಪ್​​ನಿಂದ ಟೀಂ ಇಂಡಿಯಾ ಎಡಗೈ ಬ್ಯಾಟ್ಸ್​​ಮನ್​ ಶಿಖರ್​ ಧವನ್​ ಹೊರಬಿದಿದ್ದಾರೆ. ಇವರ ಸ್ಥಾನಕ್ಕೆ ಉದಯೋನ್ಮುಖ ಆಟಗಾರ ರಿಷಭ್​ ಪಂತ್​ ಅವಕಾಶ ಪಡೆದುಕೊಂಡು ತಂಡ ಸೇರಿಕೊಂಡಿದ್ದಾರೆ. ಆದರೆ, ಆಡುವ 11ರಲ್ಲಿ ಚಾನ್ಸ್​ ಪಡೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ.

By

Published : Jun 19, 2019, 7:37 PM IST

ರಿಷಭ್​ ಪಂತ್​​

ಲಂಡನ್​: ರಿಷಭ್​ ಪಂತ್​ ವಿಶ್ವಕಪ್​​ನಲ್ಲಿ ಸ್ಥಾನ ಪಡೆದುಕೊಳ್ಳುವ ಕನಸು ಕೊನೆಗೂ ನನಸಾಗಿದೆ. ವಿಶ್ವಕಪ್​​ನಿಂದ ಶಿಖರ್​ ಧವನ್​ ಹೊರಬಿದ್ದಿದ್ದು ಖಚಿತವಾಗುತ್ತಿದ್ದಂತೆ ತಂಡವನ್ನ ರಿಷಭ್​ ಪಂತ್​​ ಸೇರಿಕೊಂಡಿದ್ದು, ಇದೀಗ ಅವರಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.

ತಂಡ ವಿಶ್ವಕಪ್​​ನಲ್ಲಿ ಈಗಾಗಲೇ ಅದ್ಭುತ ಪ್ರದರ್ಶನ ನೀಡುತ್ತಿದೆ. ಶಿಖರ್​ ಧವನ್​ ಅನುಪಸ್ಥಿತಿಯಲ್ಲೇ ಪಾಕ್​ ವಿರುದ್ಧ ಅಬ್ಬರಿಸಿದ್ದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿತ್ತು. ಗಬ್ಬರ್​ ಸಿಂಗ್​ ಸ್ಥಾನಕ್ಕೆ ಆರಂಭಿಕರಾಗಿ ಕೆ.ಎಲ್.​ ರಾಹುಲ್​ ಹಾಗೂ 4ನೇ ಕ್ರಮಾಂಕದಲ್ಲಿ ವಿಜಯ್​ ಶಂಕರ್​ ಅವಕಾಶ ಪಡೆದುಕೊಂಡು ತಮ್ಮ ಸಾಮರ್ಥ್ಯ ಸಾಬೀತು ಪಡೆಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಅವರು ಅವಕಾಶ ಪಡೆದುಕೊಳ್ಳುವುದು ಕನ್ಫರ್ಮ್ ಆಗಿದೆ.

ರಿಷಭ್​ ಪಂತ್​​

ಇದರ ಮಧ್ಯೆ ಈಗಾಗಲೇ ವಿಶ್ವಕಪ್​ಗಾಗಿ ಸ್ಥಾನ ಪಡೆದುಕೊಂಡು, ಹೊರಗಡೆ ಇರುವ ದಿನೇಶ್​ ಕಾರ್ತಿಕ್​ ಹಾಗೂ ರವೀಂದ್ರ ಜಡೇಜಾ ಕೂಡ ಅದ್ಭುತ ಆಟಗಾರರಾಗಿದ್ದು, ಇವರ ಜತೆ ರಿಷಭ್​ ಫೈಟ್​ ನಡೆಸಬೇಕಾಗಿದೆ. ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಬಲ್ಲ ರಿಷಭ್​, ಚುಟುಕು ಮಾದರಿ ಕ್ರಿಕೆಟ್​ಗೆ ಹೇಳಿ ಮಾಡಿಸಿರುವ ಆಟಗಾರ. ಆದರೆ, ಏಕದಿನ ಪಂದ್ಯದಲ್ಲಿ ಅವರ ಬ್ಯಾಟಿಂಗ್​ ಪ್ರದರ್ಶನ ಹಾಗೂ ವಿಶ್ವಕಪ್​​ನಂತಹ ಮೆಗಾ ಟೂರ್ನಿಗಳಲ್ಲಿ ಯಾವ ರೀತಿಯಾಗಿ ರನ್​ಗಳಿಕೆ ಮಾಡಬಲ್ಲರು ಎಂಬುದು ಪ್ರಮುಖವಾಗುತ್ತದೆ.

ಐಪಿಎಲ್​​ನಲ್ಲಿ ಮಿಂಚಿರುವ ರಿಷಭ್​ ಪಂತ್​, ಈಗಾಗಲೇ ಟೀಂ ಇಂಡಿಯಾ ಪರ 5 ಏಕದಿನ ಪಂದ್ಯಗಳನ್ನಾಡಿದ್ದು ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಹೀಗಾಗಿ ಅವರಿಗೆ ಚಾನ್ಸ್​ ಸಿಗುವುದು ಸ್ವಲ್ಪ ಕಷ್ಟವೇ ಸಾಧ್ಯ.

ABOUT THE AUTHOR

...view details