ನವದೆಹಲಿ :ಭಾರತ ತಂಡದ ಆಲ್ರೌಂಡರ್ಗಳಾದ ಪಾಂಡ್ಯ ಸಹೋರರ ತಂದೆ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಟ್ವಿಟರ್ನಲ್ಲಿ ತಂದೆಯ ಬಗ್ಗೆ ಭಾವುಕವಾಗಿ ಬರೆದುಕೊಂಡಿರುವ ಅವರು, ತಮ್ಮ ತಂದೆಯನ್ನು ಪ್ರತಿದಿನ ಮಿಸ್ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
"ಅಪ್ಪ, ನಾನು ನಿನ್ನೆ ಹೇಳಿದಂತೆ, ಅದು ನಿಮ್ಮ ಕೊನೆಯ ಸವಾರಿಯಾಗಿದೆ. ನೀವು ನನ್ನ ರಾಜ, ನಿಮ್ಮ ಆತ್ಮಕ್ಕೆ ಶಾಂತಿಸಿಗಲಿ, ನಿಮ್ಮದು ಸಂತೋಷದ ಆತ್ಮ" ಎಂದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶನಿವಾರ ಬರೋಡ ತಂಡದ ನಾಯಕರಾಗಿದ್ದ ಹಾರ್ದಿಕ್ ಸಹೋದರ, ಕೃನಾಲ್ ಪಾಂಡ್ಯ ತಮ್ಮ ತಂದೆಯ ಸಾವಿನ ಸುದ್ದಿ ತಿಳಿದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಬಯೋಬಬಲ್ನಿಂದ ಹೊರ ಬಂದಿದ್ದರು.
ತಂಡದ ನಾಯಕರಾಗಿದ್ದ ಅವರು ಟೂರ್ನಿಯ ಮುಂದಿನ ಭಾಗವನ್ನು ತಪ್ಪಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಬರೋಡ ಕ್ರಿಕೆಟ್ ಅಸೋಸಿಯೇಷನ್ನ ಸಿಇಒ ಶಿಶಿರ್ ಹತ್ತಂಗಡಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಟೂರ್ನಿ ಮುಗಿಯುತ್ತಿದ್ದಂತೆ ತವರಿಗೆ ಮರಳಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ವಿರುದ್ಧದ ಸರಣಿಯ ತಯಾರಿಯಲ್ಲಿದ್ದಾರೆ.