ಕೋಲ್ಕತ್ತಾ: ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ನಲ್ಲಿ ಡಿಆರ್ಎಸ್ ಸೌಲಭ್ಯ ಒದಗಿಸಲಾಗಿದ್ದು, ಕರ್ನಾಟಕ ತಂಡ ತನ್ನ ಮೊದಲ ರಿವ್ಯೂನಲ್ಲೇ ಯಶಸ್ಸು ಸಾಧಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದ ನಡುವೆ ರಣಜಿ ಸೆಮಿಫೈನಲ್ ನಡೆಯುತ್ತಿದೆ. ಬಿಸಿಸಿಐ 2020ರಿಂದ ರಣಜಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಕೆಲವು ನಿಬಂಧನೆ ಹೇರಿ ಡಿಆರ್ಎಸ್ ಸೌಲಭ್ಯ ಒದಗಿಸಿದೆ. ಒಂದು ತಂಡ ಇನ್ನಿಂಗ್ಸ್ನಲ್ಲಿ ನಾಲ್ಕು ಬಾರಿ ಅಂಪೈರ್ ತೀರ್ಪನ್ನು ಪ್ರಶ್ನಿಸಬಹುದಾಗಿದೆ.
ಕರ್ನಾಟಕ ತಂಡ ರಣಜಿ ಇತಿಹಾಸದಲ್ಲಿ ಮೊದಲ ಡಿಆರ್ಎಸ್ ತೆಗೆದುಕೊಂಡ ತಂಡ ಎನಿಸಿಕೊಂಡಿತು. ಬಂಗಾಳದ ಅಭಿಷೇಕ್ ರಾಮನ್ ಡಿಆರ್ಎಸ್ ಮೂಲಕ ವಿಕೆಟ್ ಕಳೆದುಕೊಂಡ ಮೊದಲಿಗರಾದರು.
ಅಭಿಮನ್ಯು ಮಿಥುನ್ ಬೌಲಿಂಗ್ನಲ್ಲಿ ರಾಮನ್ ಕೀಪರ್ಗೆ ಕ್ಯಾಚ್ ನೀಡಿದ್ದರು. ಆದರೆ ಅಂಪೈರ್ ಔಟ್ ನೀಡಿರಲಿಲ್ಲ. ನಂತರ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ರಿವ್ಯೂ ಕೇಳಿದರು. ಮೂರನೇ ಅಂಪೈರ್ ಟಿವಿ ರಿಪ್ಲೇ ನೋಡಿ ಔಟ್ ಎಂದು ಮೈದಾನದ ಅಂಪೈರ್ ತೀರ್ಪಿಗೆ ವ್ಯತಿರಿಕ್ತ ತೀರ್ಪು ನೀಡಿದರು.
ಇದೇ ರೀತಿ ಮೊದಲ ಬಾರಿಗೆ ಬ್ಯಾಟ್ಸ್ಮನ್ ಶ್ರೀವಾಸ್ತವ್ ಗೋಸ್ವಾಮಿ ಕೂಡ ಅಂಪೈರ್ ನೀಡಿದ ಔಟ್ ತೀರ್ಪನ್ನು ಪ್ರಶ್ನಿಸಿ ರಿವ್ಯೂ ತೆಗೆದುಕೊಂಡರು. ಆದರೆ ಈ ತೀರ್ಪು ಅಂಪೈರ್ ಪರ ಬಂದಿತು. ಒಟ್ಟಾರೆ ರಣಜಿ ಸೆಮಿಫೈನಲ್ನಲ್ಲಿ ಇದೇ ಮೊದಲು ಜಾರಿಗೆ ಬಂದಿರುವ ಡಿಆರ್ಎಸ್ ನಿಯಮ ಕರ್ನಾಟಕ ತಂಡಕ್ಕೆ ಅನುಕೂಲಕರವಾಗಿತ್ತು.