ಕೋಲ್ಕತ್ತಾ: ಬಂಗಾಳದ ಯುವ ಬೌಲರ್ ಇಶಾನ್ ಪೊರೆಲ್ ದಾಳಿಗೆ ಸಿಲುಕಿ ಕೇವಲ 122 ರನ್ಗಳಿಗೆ ಸರ್ವಪತನ ಕಂಡ ಕರ್ನಾಟಕ ತಂಡದ 8ನೇ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕನಸು ನುಚ್ಚುನೂರಾಗಿದೆ.
ಕೋಲ್ಕತ್ತಾ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 122 ರನ್ಗಳಿಗೆ ಆಲೌಟ್ ಆಗುವ ಮೂಲಕ 190 ರನ್ಗಳ ಭಾರಿ ಹಿನ್ನಡೆ ಅನುಭವಿಸಿದೆ.
ಭಾರತ ತಂಡದ ಪರ ಅದ್ಭುತ ಪ್ರದರ್ಶನ ತೋರಿದ್ದ ರಾಹುಲ್, ಕರ್ನಾಟಕ ತಂಡ ಸೇರಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಯುವ ವೇಗಿ ಇಶಾನ್ ಪೊರೆಲ್ 5 ವಿಕೆಟ್ ಹಾಗೂ ಆಕಾಶ್ ದೀಪ್ 3 ಹಾಗೂ ಮುಖೇಶ್ ಕುಮಾರ್ 2 ವಿಕೆಟ್ ಪಡೆದು ಕರ್ನಾಟಕ ತಂಡವನ್ನು 122 ರನ್ಗಳಿಗೆ ಕಟ್ಟಿಹಾಕಿದ್ರು.
31 ರನ್ ಗಳಿಸಿದ ಕೆ ಗೌತಮ್ ತಂಡದ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಅನುಭವಿಗಳಾದ ರಾಹುಲ್ (26), ಮನೀಷ್ ಪಾಂಡೆ(12) ಕರುಣ್ ನಾಯರ್(3), ಸಮರ್ಥ್(0), ಸಿದ್ಧಾರ್ಥ್ (14), ಯುವ ಬ್ಯಾಟ್ಸ್ಮನ್ಗಳಾದ ಪಡಿಕ್ಕಲ್ (4) ಶರತ್(1) ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸಿದರು.