ಮುಂಬೈ: ಪವರ್ ಹಿಟ್ಟರ್ ಖ್ಯಾತಿಯ ಸುರೇಶ್ ರೈನಾ ದಶಕದ ಹಿಂದೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಈ ಸ್ಮರಣೀಯ ಸಂದರ್ಭವನ್ನು ನೆನಪಿಸಿಕೊಂಡಿರುವ ಅವರು ಅದು ನನ್ನ ವೃತ್ತಿ ಜೀವನದ ಅತ್ಯಂತ ಮಧುರ ಕ್ಷಣ ಎಂದಿದ್ದಾರೆ.
ದೇಶದ ಪರ ಮೊದಲ ಶತಕ ಸಿಡಿಸಿದ್ದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಮತ್ತು ಅದೊಂದು ಸ್ಮರಣೀಯ ಕ್ಷಣ. ಈ ಶತಕ ನನಗೆ ಮೈದಾನದಲ್ಲಿ ಹೋರಾಡಲು ಶಕ್ತಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.
ಆ ಪಂದ್ಯದಲ್ಲಿ ರೈನಾ ಶತಕದ ನೆರವಿನಿಂದ ಭಾರತ ತಂಡ 186 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 172 ರನ್ಗಳಿಸಲಷ್ಟೇ ಶಕ್ತವಾಗಿ 14 ರನ್ಗಳ ಸೋಲನುಭವಿಸಿತ್ತು.
ಕೊರೊನಾ ನಿಧಿಗೆ ರೈನಾ ದೇಣಿಗೆ:
ಇನ್ನು ದೇಶವೇ ಕೊರೊನಾ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದೆ. ಸುರೇಶ್ ರೈನಾ ಕೊರೊನಾ ಪರಿಹಾರ ಕಾರ್ಯಗಳಿಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ 20 ಹಾಗೂ ಕೇಂದ್ರ ಸರ್ಕಾರಕ್ಕೆ 31 ಲಕ್ಷ ರೂ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.