ಕರ್ನಾಟಕ

karnataka

ETV Bharat / sports

ಕಳೆದು ಹೋದ ದಿನಗಳ ಬಗ್ಗೆ ಮಾತನಾಡಿ ಉಪಯೋಗವಿಲ್ಲ: ಉನ್ಮಕ್ತ್​ ಚಾಂದ್​ ಬೇಸರ - ವಿರಾಟ್​ ಕೊಹ್ಲಿ

ಚಾಂದ್​ 67 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳಲ್ಲಿ 3379 ರನ್ ​ಗಳಿಸಿದ್ದಾರೆ. ಅವರು 2012 ವಿಶ್ವಕಪ್​ ನಂತರ ಭಾರತ ಎ ತಂಡದ ನಾಯಕನಾಗಿ ಉತ್ತಮವಾಗಿ ರನ್ ​ಗಳಿಸಿದರೂ ಟೀಮ್​ ಇಂಡಿಯಾದಿಂದ ಕರೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉನ್ಮಕ್ತ್​ ಚಾಂದ್​
ಉನ್ಮಕ್ತ್​ ಚಾಂದ್​

By

Published : Jun 8, 2020, 10:25 AM IST

ನವದೆಹಲಿ: ಒಂದು ಕಾಲದಲ್ಲಿ ಭವಿಷ್ಯದ ಕೊಹ್ಲಿ ಎಂದೇ ಬಿಂಬಿತವಾಗಿದ್ದ ಭಾರತಕ್ಕೆ 2012 ರ ಅಂಡರ್​ 19 ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಉನ್ಮುಕ್ತ್​ ಚಾಂದ್​ ತಮ್ಮ ಗತಕಾಲದ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಚಾಂದ್​ ತಮ್ಮ ಅಂಡರ್​ 19 ವಿಶ್ವಕಪ್​ ವಿಜಯದ ಬಗ್ಗೆ ಮಾತನಾಡುತ್ತಾ, ಖಂಡಿತವಾಗಿಯೂ ಯಾವುದೇ ಅಂಡರ್​ 19 ಆಟಗಾರನಿಗೂ ವಿಶ್ವಕಪ್​ ಅತಿ ಮುಖ್ಯವಾದ ವಿಷಯವಾಗಿರುತ್ತದೆ. ಕೆಲವು ವರ್ಷಗಳ ಕಠಿಣ ಪರಿಶ್ರಮ-ಜೂನಿಯರ್​ ಕ್ರಿಕೆಟ್​ ಆಡಿದವರಿಗೆ ಹಾಗೂ 16 ವರ್ಷದೊಳಗಿನವರಿಗೆ ಜೂನಿಯರ್​ ವಿಶ್ವಕಪ್​ ಅರ್ಹತೆ ಕೂಡ ಮಹತ್ವದ್ದಾಗಿರುತ್ತದೆ. ಎಲ್ಲಾ ಸೀನಿಯರ್​ ಆಟಗಾರರಿಗೂ ವಿಶ್ವಕಪ್​ ಗೆಲ್ಲುವ ಕನಸು ಹೇಗೋ, 19 ವರ್ಷದೊಳಗಿನವರಿಗೆ ಜೂನಿಯರ್​ ವಿಶ್ವಕಪ್​ ಎತ್ತಿ ಹಿಡಿಯುವುದು ಸಹ ದೊಡ್ಡ ಕನಸಾಗಿರುತ್ತದ ಎಂದಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯಷ್ಟೇ ವಿರಾಟ್ ಬಯ್ಯಾ ತಂಡವನ್ನು ಮುನ್ನಡೆಸುವುದು ಮತ್ತು ವಿಶ್ವಕಪ್​ ಗೆದ್ದಿದ್ದನ್ನು ನಾನು ನೋಡಿದ್ದೆ. ಅದು ನನ್ನ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ಆದರೆ ನಮ್ಮಿಬ್ಬರ ಕಥೆಗಳು ವಿಭಿನ್ನವಾಗಿವೆ ಎಂದು ನನಗೆ ತಿಳಿದಿತ್ತು. ಎಲ್ಲರಂತೆ ನಾನು ಸ್ವಾಭಾವಿಕವಾಗಿ ಟೀಮ್​ ಇಂಡಿಯಾ ಪರ ಆಡುವ ಬಯಕೆಗಿಂತ ಅಂಡರ್​ 19 ವಿಶ್ವಕಪ್​ ಗೆಲ್ಲುವುದರ ಕಡೆಗೆ ಹೆಚ್ಚು ಗಮನ ನೀಡಿದ್ದೆ ಎಂದು 2012 ಅಂಡರ್​ 19 ವಿಶ್ವಕಪ್​ ವಿಜೇತ ತಂಡದ ನಾಯಕ ಹೇಳಿದ್ದಾರೆ.

ಚಾಂದ್​ 67 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳಲ್ಲಿ 3,379 ರನ್ ​ಗಳಿಸಿದ್ದಾರೆ. ಅವರು 2012 ವಿಶ್ವಕಪ್​ ನಂತರ ಭಾರತ ಎ ತಂಡದ ನಾಯಕನಾಗಿ ಉತ್ತಮವಾಗಿ ರನ್​ ಗಳಿಸಿದರೂ ಟೀಮ್​ ಇಂಡಿಯಾದಿಂದ ಕರೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್​ ಬಳಿಕ ನನಗೆ ಅವಕಾಶಗಳು ಸಿಗಲಿಲ್ಲ ಎಂದಲ್ಲ. ನಾನು ಇಂಡಿಯಾ ಎ ಪರ ಆಡಿದ್ದೇನೆ. ಮತ್ತು 2016ರ ವರೆಗೆ ತಂಡದ ನಾಯಕನಾಗಿದ್ದೆ, ಉತ್ತಮವಾಗಿ ರನ್​ ಗಳಿಸುತ್ತಿದ್ದೆ. ಕೆಲವು ಬಾರಿ ನನಗೆ ಸಿದ್ಧರಾಗಿರಿ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಆಯ್ಕೆ ಸಮಿತಿಯಿಂದಲೂ ಕರೆ ಬಂದಿತ್ತು ಎಂದು ಉನ್ಮಕ್ತ್​ ಹೇಳಿದ್ದಾರೆ.

ಆದರೆ ಆ ಸಂದರ್ಭದಲ್ಲಿ ಭಾರತ ತಂಡದಲ್ಲಿನ ಸಂಯೋಜನೆ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ನಾನು ಉತ್ತಮವಾಗಿ ಆಡುತ್ತಿದ್ದ ಸಂದರ್ಭದಲ್ಲಿ ವಿರೂ ಭಯ್ಯಾ ಹಾಗೂ ಗೌತಮ್​ ಭಯ್ಯಾ ಅವರು ಭಾರತಕ್ಕಾಗಿ ಅದ್ಭುತವಾಗಿ ಆಡುತ್ತಿದ್ದುದು ನನಗೆ ಬಹಳ ಸ್ಪಷ್ಷವಾಗಿ ನೆನಪಿದೆ. ಆ ನಂತರ ಭಾರತ ತಂಡಕ್ಕೆ ಆರಂಭಿಕರ ಕೊರತೆಯಾದ ಅವಧಿಯಲ್ಲಿ ನಾನು ಫಾರ್ಮ್​ ಕಳೆದುಕೊಂಡಿದ್ದೆ. ಈ ವಿಚಾರ ಕೂಡ ನನಗೆ ಮಹತ್ವದ್ದಾಗಿದೆ ಎಂದು ಚಾಂದ್​ ತಿಳಿಸಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯದಿದ್ದರೂ ನಾನು ನನ್ನ ಕ್ರಿಕೆಟ್​ ಪಯಣದಲ್ಲಿ ಉತ್ತಮ ಅನುಭವ ಪಡೆದಿದ್ದೇನೆ ಎಂದು ಚಾಂದ್​ ಹೇಳಿಕೊಂಡಿದ್ದಾರೆ.

ABOUT THE AUTHOR

...view details