ಹೈದರಾಬಾದ್: ಭಾರತ-ವಿಂಡೀಸ್ ನಡುವಿನ ಮೊದಲ ಟಿ-20 ಪಂದ್ಯ ಸ್ಥಳಾಂತರಗೊಂಡಿದೆ. ವಿಂಡೀಸ್ ಪ್ರವಾಸದ ಮೊದಲ ಟಿ-20 ಪಂದ್ಯ ಮುಂಬೈ ಈ ಮೊದಲು ಆಯೋಜನೆಯಾಗಿತ್ತು.
ಭಾರತ-ವಿಂಡೀಸ್ ಟಿ-20 ಪಂದ್ಯಕ್ಕೆ ಭದ್ರತೆ ನೀಡಲು ಪೊಲೀಸರು ಅಸಾಧ್ಯ ಎಂದ ಕಾರಣದಿಂದ ಮುಂಬೈನಲ್ಲಿ ಡಿ.6ರಂದು ನಡೆಯಬೇಕಿದ್ದ ಪಂದ್ಯವನ್ನು ಹೈದರಾಬಾದ್ಗೆ ಸ್ಥಳಾಂತರ ಮಾಡಲಾಗಿದೆ. ಡಿ.11ರಂದು ಹೈದರಾಬಾದ್ನಲ್ಲಿ ಆಯೋಜನೆಯಾಗಿದ್ದ ಅಂತಿಮ ಟಿ-20 ಮುಂಬೈಗೆ ಶಿಫ್ಟ್ ಮಾಡಲಾಗಿದೆ.
ಡಿ.6ರಂದು ಬಾಬ್ರಿ ಮಸೀದಿ ಧ್ವಂಸದ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. ಬಾಬ್ರಿ ಮಸೀದಿ ಧ್ವಂಸದ ವೇಳೆ ಮುಂಬೈನಲ್ಲಿ ಭಾರಿ ಗಲಭೆ ಹಲವಾರು ಮಂದಿ ಪ್ರಾಣಬಿಟ್ಟಿದ್ದರು. ಹೀಗಾಗಿ ಡಿ.6ರಂದು ಕ್ರಿಕೆಟ್ ಪಂದ್ಯಕ್ಕೆ ಅಗತ್ಯವಿರುವ ಭದ್ರತೆ ನೀಡುವುದು ಅಸಾಧ್ಯ ಎಂದು ಕೆಲ ದಿನಗಳ ಹಿಂದೆ ಮುಂಬೈ ಪೊಲೀಸರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ತಿಳಿಸಿದ್ದರು.
ಸದ್ಯ ಮುಂಬೈ ಪೊಲೀಸರ ಮಾತಿಗೆ ಮನ್ನಣೆ ನೀಡಿರುವ ಬಿಸಿಸಿಐ ಸದ್ಯ ಮುಂಬೈ ಪಂದ್ಯವನ್ನು ಹೈದರಾಬಾದ್ಗೆ ಹಾಗೂ ಹೈದರಾಬಾದ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರ ಮಾಡಿದೆ.