ಕರ್ನಾಟಕ

karnataka

ETV Bharat / sports

ಲಂಕಾದಲ್ಲಿ ಫ್ಯಾನ್ಸ್‌ಗಳಿಂದ ಕುರುಡ ಮತ್ತು ಕಿವುಡ ಮಕ್ಕಳಿಗೆ ಆಹಾರ ವಿತರಿಸಿ ಧೋನಿ ಬರ್ತ್‌ಡೇ ಆಚರಣೆ

ಭಾರತ ಕ್ರಿಕೆಟ್​ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಏಕೈಕ ನಾಯಕ. ತಮ್ಮ ತಾಳ್ಮೆಯ ಮನೋವಭಾವದಿಂದ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ನಿನ್ನೆ ವಿಶೇಷವಾಗಿ ಧೋನಿ ಹುಟ್ಟಹಬ್ಬವನ್ನಾಚಿರಿಸಿಕೊಂಡಿದ್ದಾರೆ..

By

Published : Jul 8, 2020, 6:30 PM IST

MS Dhoni fans grand celebrates his birthday
ಎಂಎಸ್​ ಧೋನಿ ಹುಟ್ಟಿದ ಹಬ್ಬ

ಜಫ್ನಾ(ಶ್ರೀಲಂಕಾ):ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮಂಗಳವಾರ 39ನೇ ಹುಟ್ಟುಹಬ್ಬವನ್ನಾಚರಿಸಿಕೊಂಡಿದ್ದರು.

ಭಾರತ ಕ್ರಿಕೆಟ್​ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಏಕೈಕ ನಾಯಕ. ತಮ್ಮ ತಾಳ್ಮೆಯ ಮನೋಭಾವದಿಂದ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ನಿನ್ನೆ ವಿಶೇಷವಾಗಿ ಧೋನಿ ಹುಟ್ಟಹಬ್ಬವನ್ನಾಚಿರಿಸಿದ್ದಾರೆ.

ಭಾರತದ ಕೆಲವೆಡೆ ಅಭಿಮಾನಿಗಳು ರಕ್ತದಾನದ ಮಾಡುವ ಮೂಲಕ ಧೋನಿ ಜನ್ಮದಿನವನ್ನಾಚರಿಸಿದ್ದರು. ಆಶ್ಚರ್ಯವೆಂದ್ರೆ ಶ್ರೀಲಂಕಾದ ನಾರ್ಥರ್ನ್​ ಪ್ರಾಂತ್ಯದ ರಾಜಧಾನಿಯಾದ ಜಫ್ನಾದಲ್ಲಿ ರಕ್ತದಾನ, ಕಿವುಡು ಮತ್ತು ಕುರುಡ ಮಕ್ಕಳಿಗೆ ಆಹಾರ ವ್ಯವಸ್ಥೆ ಮಾಡುವ ಮೂಲಕ ಧೋನಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಅಲ್ಲದೆ ಧೋನಿ ಅಭಿಮಾನಿಗಳ ಬಳಗ 16,500 ರೂಪಾಯಿಯನ್ನು ನಫೀಲ್ಡ್​ ಕಿವುಡ ಮತ್ತು ಕುರುಡ ಮಕ್ಕಳ ಶಾಲೆಗೆ ದೇಣಿಗೆ ನೀಡಿದೆ ಎಂದು ಶ್ರೀಲಂಕಾದ ನ್ಯೂಸ್​ಫೈರ್​ ಮಾಧ್ಯಮ ವರದಿ ಮಾಡಿದೆ. ಈ ವಿಡಿಯೋವನ್ನು ಪತ್ರಕರ್ತ ಸಾಮ್ರಾಟ್​ ಚಕ್ರಬೋರ್ತಿ ಎಂಬುವರು ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದು ವಿಡಿಯೋ ವೈರಲ್​ ಆಗುತ್ತಿದೆ.

ABOUT THE AUTHOR

...view details