ಕರ್ನಾಟಕ

karnataka

By

Published : Dec 30, 2019, 11:03 PM IST

ETV Bharat / sports

ಟಿ-20 ವಿಶ್ವಕಪ್​​ನಲ್ಲಿ ಧೋನಿ ಇಲ್ಲದಿದ್ದರೆ ಈ ವಿಕೆಟ್​​​ ಕೀಪರ್​​​​​​ ಆಯ್ಕೆ ಸೂಕ್ತ ಎಂದ ಕುಂಬ್ಳೆ!

ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್​ ಮಹಾಟೂರ್ನಿಗಾಗಿ ಈ ಉದಯೋನ್ಮುಖ ಆಟಗಾರನಿಗೆ ಆಯ್ಕೆ ಸಮಿತಿ ಚಾನ್ಸ್​ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Dhoni, kumble
ಧೋನಿ-ಅನಿಲ್​​ ಕುಂಬ್ಳೆ

ಮುಂಬೈ:ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-20 ಕ್ರಿಕೆಟ್​ ವಿಶ್ವಕಪ್​ ಮಹಾಟೂರ್ನಿಯಲ್ಲಿ ಎಂ.ಎಸ್​.ಧೋನಿಗೆ ಅವಕಾಶ ನೀಡಿಲ್ಲವೆಂದರೆ ಈ ವಿಕೆಟ್​ ಕೀಪರ್​ಗೆ ಮೊದಲ ಅವಕಾಶ​ ನೀಡಬೇಕು ಎಂದು ತಂಡದ ಮಾಜಿ ಕೋಚ್​ ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ, ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​​​ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ-20 ಕ್ರಿಕೆಟ್​ ಟೂರ್ನಿಯಲ್ಲಿ ಧೋನಿ ಇಲ್ಲದಿದ್ದರೆ ವಿಕೆಟ್​ ಕೀಪರ್​ ಆಗಿ ಯುವ ಉದಯೋನ್ಮುಖ ಆಟಗಾರನಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಸಂಜು ಸ್ಯಾಮ್ಸನ್​​

2019ರ ಏಕದಿನ ವಿಶ್ವಕಪ್​ ಮುಕ್ತಾಯಗೊಂಡಾಗಿನಿಂದಲೂ ಎಂ.ಎಸ್​.ಧೋನಿ ಯಾವುದೇ ಕ್ರಿಕೆಟ್​ ಟೂರ್ನಿಯಲ್ಲಿ ಭಾಗಿಯಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಷಭ್​ ಪಂತ್​ಗೆ ಚಾನ್ಸ್​ ನೀಡಲಾಗಿದ್ದು, ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಮೀಸಲು ವಿಕೆಟ್​​ ಕೀಪರ್​ ಆಗಿ ಕೆಲವೊಂದು ಪಂದ್ಯಗಳಿಗೆ ಸಂಜು ಸ್ಯಾಮ್ಸನ್​ ಆಯ್ಕೆಗೊಂಡಿದ್ದರೂ ಆಡುವ 11ರ ಬಳಗದಲ್ಲಿ ಚಾನ್ಸ್​ ಪಡೆದುಕೊಂಡಿಲ್ಲ. ಹೀಗಾಗಿ ಇದೀಗ ಅವರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಇನ್ನು ವಿಶ್ವಕಪ್ ಮಹಾಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಐಪಿಎಲ್​ ನಡೆಯಲಿದ್ದು, ಅದರಲ್ಲಿ ಧೋನಿ ಅದ್ಭುತ ಪ್ರದರ್ಶನ ನೀಡಿದ್ರೆ ತಂಡಕ್ಕೆ ಅವರ ಆಯ್ಕೆ ಕನ್ಫರ್ಮ್​ ಆಗಲಿದೆ.

ಇದರ ಜತೆಗೆ ಅನಿಲ್​ ಕುಂಬ್ಳೆ ವಿಕೆಟ್​ ಕೀಪರ್​ ಆಗಿ ಈಶನ್ ಕಿಶನ್ ಹಾಗೂ ಕೆ.ಎಲ್.ರಾಹುಲ್​ ಬಗ್ಗೆ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್​ ಹಾಗೂ ಕರ್ನಾಟಕದ ದೇಶಿ ಕ್ರಿಕೆಟ್​ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದಾರೆ. ​​

ABOUT THE AUTHOR

...view details