ಆ್ಯಂಟಿಗುವಾ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಹೆಬ್ಬೆರಳು ಗಾಯವಾಗಿರುವ ಪರಿಣಾಮ ಅಭ್ಯಾಸ ಪಂದ್ಯದಲ್ಲಿ ಉಪನಾಯಕ ಅಜಿಂಕ್ಯಾ ರಹಾನೆಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.
ವೆಸ್ಟ್ ಇಂಡೀಸ್ ಎ ವಿರುದ್ಧ ನಡೆಯುತ್ತಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ರಹಾನೆ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿದಿದೆ.
ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಕೆಮರ್ ರೋಚ್ ಬೌಲಿಂಗ್ನಲ್ಲಿ ಕೊಹ್ಲಿ ಬಲಗೈ ಹೆಬ್ಬೆರಳಿಗೆ ಬಾಲ್ಬಿದ್ದು ಉಗುರು ಕಿತ್ತುಬಂದಿತ್ತು. ಆದರೂ ಉತ್ತಮ ಬ್ಯಾಟಿಂಗ್ ನಡೆಸಿ ಶತಕ ಪೂರ್ಣಗೊಳಿಸಿದ್ದರು.