ಕರ್ನಾಟಕ

karnataka

ಆಘಾತದ ಜತೆ ಎದೆ ಒಡೆದು ಹೋಯ್ತು, ಧೋನಿಗೆ ದೊಡ್ಡ ಮಟ್ಟದ ವಿದಾಯ ನೀಡ್ತಿದ್ದೆವು: ರಾಹುಲ್

By

Published : Aug 19, 2020, 3:20 PM IST

ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದು ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ತರಿಸಿದೆ. ಈ ಬಗ್ಗೆ ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್​ ಮಾತನಾಡಿದ್ದಾರೆ.

KL Rahul
KL Rahul

ಹೈದರಾಬಾದ್​: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತಾಗಿ ಮಾಜಿ/ ಹಾಲಿ ಕ್ರಿಕೆಟರುಗಳು, ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಹಿ ದಿಢೀರ್​ ನಿವೃತ್ತಿ ತೆಗೆದುಕೊಂಡಿರುವ ಸುದ್ದಿ ಕೇಳಿ ಅರೆಕ್ಷಣ ಎದೆ ಒಡೆದಂತಾಯಿತು ಎಂದು ಕ್ರಿಕೆಟಿಗ‌ ಕೆ.ಎಲ್​.ರಾಹುಲ್​ ಹೇಳಿದ್ದಾರೆ. ಕ್ರಿಕ್​ ಇನ್ಫೋ ಜತೆ ಸಂವಾದ ನಡೆಸುತ್ತಿದ್ದ ವೇಳೆ ತಮ್ಮ ಮನದಾಳ ಹಂಚಿಕೊಂಡರು.

ವಿಶ್ವಕಪ್ ಪಂದ್ಯವೊಂದರ​ ವೇಳೆ ಎಂ.ಎಸ್‌.ಧೋನಿ

ಅವರು (ಧೋನಿ) ಕೊನೆಯದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ನಿವೃತ್ತಿ ಘೋಷಣೆ ಬಗ್ಗೆ ಮಾಹಿತಿ ನೀಡಿದ್ದಿದ್ದರೆ, ಖಂಡಿತವಾಗಿಯೂ ನಾವು ದೊಡ್ಡ ಮಟ್ಟದಲ್ಲಿ ಫೇರ್​ವೆಲ್​ ಪಾರ್ಟಿ ನೀಡುತ್ತಿದ್ದೇವು ಎಂದು ಅವರು ತಿಳಿಸಿದ್ದಾರೆ.

ಧೋನಿ, ರೈನಾ ಹಾಗು ಇನ್ನಿತರ ಕ್ರಿಕೆಟಿಗರ ಜತೆ ಕೆ.ಎಲ್‌.ರಾಹುಲ್​​

ತಂಡದಲ್ಲಿದ್ದಾಗ ಧೋನಿ ಎಲ್ಲ ಯುವ ಕ್ರಿಕೆಟರಿಗರಿ​ಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ನಾವು ಮಾಡುತ್ತಿದ್ದ ತಪ್ಪುಗಳಿಂದ ತಿದ್ದಿಕೊಳ್ಳಲು ಹತ್ತಾರು ಸಲ ನಾವಿರುವ ಸ್ಥಳಕ್ಕೆ ಬಂದು ಸಲಹೆ ನೀಡಿದ್ದಾರೆ ಎಂದು ರಾಹುಲ್‌ ನೆನಪಿಸಿದರು. ಧೋನಿ ಅನುಪಸ್ಥಿತಿಯಲ್ಲಿ ಅನೇಕ ಸಲ ಟೀಂ ಇಂಡಿಯಾ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸಿರುವ ರಾಹುಲ್‌, ಮುಂದಿನ ದಿನಗಳಲ್ಲಿ ವಿಕೆಟ್​ ಕೀಪಿಂಗ್​ ಜತೆ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪಂದ್ಯವೊಂದರ ವೇಳೆ ಪಂಜಾಬ್​ ತಂಡದ ಹಡಲ್‌

ದುಬೈನಲ್ಲಿ ನಡೆಯಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡಲು ಈಗಾಗಲೇ ತಯಾರಿ ನಡೆಸುತ್ತಿರುವ ರಾಹುಲ್​, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಕನ್ನಡಿಗನ ಪಾಲಿಗೆ ಒಲಿದ ಮೊದಲ ನಾಯಕತ್ವದ ಜವಾಬ್ದಾರಿ ಇದಾಗಲಿದೆ.

13ನೇ ಆವೃತ್ತಿಯ ಐಪಿಎಲ್‌​​ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ.

ABOUT THE AUTHOR

...view details