ಕರ್ನಾಟಕ

karnataka

ETV Bharat / sports

ವಿಜಯ್ ಹಜಾರೆ ಟ್ರೋಫಿ: ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕಕ್ಕೆ ಪಾಂಡಿಚೇರಿ ಎದುರಾಳಿ! - ಕರ್ನಾಟಕ ಪಾಂಡಿಚೇರಿ

ವಿಜಯ್​ ಹಜಾರೆ ಕ್ವಾರ್ಟರ್​ ಫೈನಲ್​ ಪಂದ್ಯಗಳು ಅಕ್ಟೋಬರ್​ 20ರಿಂದ ಆರಭವಾಗಲಿದ್ದು ಕರ್ನಾಟಕ ತಂಡ ಪಾಂಡಿಚೇರಿಯನ್ನು, ದೆಹಲಿ ತಂಡ ಗುಜರಾತ್​ ತಂಡವನ್ನು ಎದುರಿಸಲಿವೆ. 22 ರಂದು ಪಂಜಾಬ್​ ತಮಿಳುನಾಡು ವಿರುದ್ಧ, ಚತ್ತಿಸ್​ಘಡ್​ ಮುಂಬೈ ವಿರುದ್ಧ ಸೆಣಸಾಡಲಿವೆ.

Quarter final

By

Published : Oct 17, 2019, 7:34 PM IST

ಬೆಂಗಳೂರು: 2019ರ ವಿಜಯ್ ಹಜಾರೆ ಸೀಮಿತ ಓವರ್​ಗಳ ಕ್ರಿಕೆಟ್ ಟೂರ್ನಿಯಲ್ಲಿ ಸಂಘಟಿತ ಹೋರಾಟ ನಡೆಸಿ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಮನೀಷ್​ ಪಡೆಗೆ ಕ್ವಾರ್ಟರ್​ಫೈನಲ್​ನಲ್ಲಿ ಪ್ಲೇಟ್​ ಗುಂಪಿ ಟಾಪರ್ ಪಾಂಡಿಚೇರಿ ತಂಡವನ್ನು ಎದುರಿಸಿದೆ.

8 ಪಂದ್ಯಗಳಲ್ಲಿ 7 ಜಯ ಹಾಗೂ 1 ಸೋಲಿನೊಂದಿಗೆ 28 ಆಂಕ ಪಡೆದಿದ್ದ ಕರ್ನಾಟಕ ತಂಡ ಎ ಮತ್ತು ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿತ್ತು. ಇನ್ನು ಈ ಗುಂಪಿನಲ್ಲಿ ಕರ್ನಾಟಕ ನಂತರದ ಸ್ಥಾನಪಡೆದಿದ್ದ ಪಂಜಾಬ್, ದೆಹಲಿ, ಛತ್ತೀಸ್​ಗಡ, ಮುಂಬೈ ತಂಡಗಳೂ ಕೂಡ ಕ್ವಾರ್ಟರ್​ ಫೈನಲ್​ ಪ್ರವೇಶಿಸಿವೆ.

ಸಿ ಗುಂಪಿನ ಅಗ್ರ ಎರಡು ತಂಡಗಳಾದ ತಮಿಳುನಾಡು, ಗುಜರಾತ್ ಹಾಗೂ ಪ್ಲೇಟ್​(ಡಿ) ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ಪಾಂಡಿಚೇರಿ ಕ್ವಾರ್ಟರ್​ಫೈನಲ್​ಗೆ ಅರ್ಹತೆಗಿಟ್ಟಿಸಿಕೊಂಡಿದೆ.

ಕ್ವಾರ್ಟರ್​ ಫೈನಲ್​ ಹಣಾಹಣಿ ಇಂತಿದೆ

ಅಕ್ಟೋಬರ್​ 20 ಕರ್ನಾಟಕ ತಂಡ ಪಾಂಡಿಚೇರಿಯನ್ನು, ದೆಹಲಿ ತಂಡ ಗುಜರಾತ್​ ತಂಡವನ್ನು ಎದುರಿಸಲಿವೆ. 22 ರಂದು ಪಂಜಾಬ್​ ತಮಿಳುನಾಡು ವಿರುದ್ಧ, ಚತ್ತಿಸ್​ಘಡ್​ ಮುಂಬೈ ವಿರುದ್ಧ ಸೆಣಸಾಡಲಿವೆ.

ABOUT THE AUTHOR

...view details