ಕರ್ನಾಟಕ

karnataka

ETV Bharat / sports

ಕಾರ್ಗಿಲ್​ ವಿಜಯ ದಿವಸ: ಸಚಿನ್​, ಕೊಹ್ಲಿ ಸೇರಿದಂತೆ ಭಾರತೀಯ ಸೈ ನಿಕರಿಗೆ ಗೌರವ ಸೂಚಿಸಿದ ಕ್ರೀಡಾಪಟುಗಳು - Sportsperson pays tribute to soldiers

ಜುಲೈ 26 1999ರಲ್ಲಿ ಭಾರತೀಯ ಸಶಸ್ತ್ರ ಪಡೆ ಕಾರ್ಗಿಲ್​ನಲ್ಲಿ ಪಾಕಿಸ್ತಾನ ಸೈನ್ಯವನ್ನು ಬಗ್ಗುಬಡಿದಿತ್ತು. ಅಂದಿನಿಂದ ಈ ದಿನವನ್ನು ಕಾರ್ಗಿಲ್​ ವಿಜಯ ದಿವಸ ಎಂದು ಆಚರಿಸಲಾಗುತ್ತಾ ಬಂದಿದೆ.

ಕಾರ್ಗಿಲ್​ ವಿಜಯ ದಿವಸ
ಕಾರ್ಗಿಲ್​ ವಿಜಯ ದಿವಸ

By

Published : Jul 26, 2020, 7:21 PM IST

ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಿದ 21ನೇ ವರ್ಷಾಚರಣೆಯ ಪ್ರಯುಕ್ತ ಭಾರತ ತಂಡದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಮತ್ತು ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತೀಯ ಕ್ರೀಡಾಪಟುಗಳು ಭಾನುವಾರ ಸೈನಿಕರಿಗೆ ಗೌರವ ಸಮರ್ಪಿಸಿದ್ದಾರೆ.

ಜುಲೈ 26 1999ರಲ್ಲಿ ಭಾರತೀಯ ಸಶಸ್ತ್ರ ಪಡೆ ಕಾರ್ಗಿಲ್​ನಲ್ಲಿ ಪಾಕಿಸ್ತಾನ ಸೈನ್ಯವನ್ನು ಬಗ್ಗುಬಡಿದಿತ್ತು. ಅಂದಿನಿಂದ ಈ ದಿನವನ್ನು ಕಾರ್ಗಿಲ್​ ವಿಜಯ ದಿವಸ ಎಂದು ಆಚರಿಸಲಾಗುತ್ತಾ ಬಂದಿದೆ. ಭಾರತೀಯ ಕ್ರೀಡಾಪಟುಗಳಾದ ಸಚಿನ್​, ವಿರಾಟ್​ ಕೊಹ್ಲಿ, ಗಗನ್​ ನಾರಂಗ್​ ಸೇರಿದಂತೆ ಹಲವಾರು ಮಂದಿ ಕಾರ್ಗಿಲ್​ ವಿಜಯೋತ್ಸವದ ಪ್ರಯುಕ್ತ ಭಾರತೀಯ ಸೈನಿಕರಿಗೆ ಗೌರವ ಸೂಚಿಸಿದ್ದಾರೆ.

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ," ನಮ್ಮನ್ನೆಲ್ಲಾ ಸುರಕ್ಷಿತವಾಗಿಡಲು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಭಾರತೀಯ ಸೈನಿಕರ ಶೌರ್ಯ ಮತ್ತು ದೈರ್ಯಶಾಲಿ ಹೃದಯಕ್ಕೆ ನನ್ನ ನಮಸ್ಕಾರ. ಜೈ ಹಿಂದ್​" ಎಂದು ಟ್ವೀಟ್​ ಮೂಲಕ ಸೈನಿಕರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.

ಭಾರತ ಕ್ರಿಕೆಟ್​ನ ಲೆಜೆಂಡ್​ ಸಚಿನ್ ತಂಡೂಲ್ಕರ್​, "ಕಾರ್ಗಿಲ್ ಯುದ್ಧದ ಸಮಯದಲ್ಲಿ ನಮ್ಮ ರಕ್ಷಣಾ ಪಡೆಗಳ ಶೌರ್ಯ ಮತ್ತು ನಿಸ್ವಾರ್ಥ ತ್ಯಾಗದ ಅಸಂಖ್ಯಾತ ಕಥೆಗಳು ವಿಸ್ಮಯಕಾರಿ ಮತ್ತು ಸ್ಪೂರ್ತಿದಾಯಕ. ನಮ್ಮ ರಾಷ್ಟ್ರಕ್ಕೆ ಅವರು ಮಾಡಿದ ಸೇವೆಗೆ ನಾವು ಯಾವಾಗಲೂ ಋಣಿಯಾಗಿರುತ್ತೇವೆ​" ಎಂದು ಬರೆದುಕೊಂಡಿದ್ದಾರೆ.

ಭಾರತ ಟೆಸ್ಟ್​ ತಂಡದ ಉಪನಾಯಕ ರಹಾನೆ ನಮ್ಮ ದೇಶದ ಸುರಕ್ಷತೆಗಾಗಿ ಪ್ರಾಣ ತ್ಯಾಗ ಮಾಡಿದ ವೀರರ ಅಜೇಯ ಮನೋಭಾವ ಮತ್ತು ಶೌರ್ಯವನ್ನು ನಾವು ಎಂದಿ ಮರೆಯಬಾರದು. ಸೈನಿಕರು ನಮ್ಮ ಹೆಮ್ಮೆ , ಜೈ ಹಿಂದ್​ ಎಂದು ಬರೆದು ಕೊಂಡು ಗೌರವ ಸೂಚಿಸಿದ್ದಾರೆ.

ನಮ್ಮ ರಾಷ್ಟ್ರವನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ ನಮ್ಮ ಕೆಚ್ಚೆದೆಯ ಸೈನಿಕರ ನಿಸ್ವಾರ್ಥ ತ್ಯಾಗವನ್ನು ನೆನಪಿಸಿಕೊಳ್ಳಬೇಕಿದೆ ಎಂದು ಕನ್ನಡಿಗ ಕೆಎಲ್​ ರಾಹುಲ್​ ಟ್ವೀಟ್​ ಮೂಲಕ ಸೈನಿಕರಿಗೆ ಗೌರವ ಸೂಚಿಸಿದ್ದಾರೆ.

ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್​ ವಿವಿಎಸ್​ ಲಕ್ಷ್ಮಣ್​ , ಕಾರ್ಗಿಲ್​ ವಿಜಯ ನಮ್ಮ ದೈರ್ಯಶಾಲಿ ಸೈನಿಕರಿಗೆ ಅರ್ಪಣೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ನಾವು ಸದಾ ಚಿರಋಣಿಯಾಗಿದ್ದೇವೆ. ಜೈಹಿಂದ್​ ಎಂದು ಟ್ವೀಟ್​ ಮಾಡಿದ್ದಾರೆ.

ಇವರಷ್ಟೇ ಅಲ್ಲದೆ ಶೂಟರ್​ಗಳಾದ ಮನು ಬಾಕರ್​, ಗಗನ್​ ನಾರಂಗ್​, ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​,ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪ ಮಲ್ಲಿಕ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಭಾರತೀಯ ಸೈನಿಕರಿಗೆ ಗೌರವ ಸೂಚಿಸಿದ್ದಾರೆ.​

ABOUT THE AUTHOR

...view details