ಕರ್ನಾಟಕ

karnataka

By

Published : Dec 5, 2020, 9:01 PM IST

ETV Bharat / sports

ಜಡೇಜಾ ಅತಿ ಹೆಚ್ಚು ತಿರಸ್ಕಾರಕ್ಕೆ ಒಳಗಾಗುತ್ತಿರುವ ಆಲ್​ರೌಂಡರ್​, ಖಂಡಿತ ಹೆಚ್ಚಿನ ಗೌರವಕ್ಕೆ ಆತ ಅರ್ಹ: ಕೈಫ್​

ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದ ವೇಳೆ ಜಡೇಜಾ ಹೆಲ್ಮೆಟ್​ಗೆ ಚೆಂಡು ಬಡೆದಿತ್ತು. ಈ ಕಾರಣದಿಂದ ಅವರ ಬದಲು ಚಹಾಲ್ ಕನ್​ಕ್ಯೂಷನ್ ಆಟಗಾರನಾಗಿ ಆಡಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಿಂದ ಜಡೇಜಾ ಹೊರಬಿದ್ದಿದ್ದಾರೆ. ಇದು ಭಾರತ ತಂಡಕ್ಕೆ ತುಂಬಲಾರದ ನಷ್ಟ ಎಂದು ಅವರು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ರವೀಂದ್ರ ಜಡೇಜಾ ಕೈಫ್​
ರವೀಂದ್ರ ಜಡೇಜಾ ಕೈಫ್​

ಸಿಡ್ನಿ: ರವೀಂದ್ರ ಜಡೇಜಾ ಹೊಂದಿರುವ ಅವರ ಆಲ್​ರೌಂಡರ್​ ಕೌಶಲ್ಯಗಳಿಗೆ ತಕ್ಕಂತೆ ಸಿಕ್ಕಬೇಕಿರುವ ಸ್ಥಾನಮಾನ ಸಿಗುತ್ತಿಲ್ಲ. ಅವರ ಸಾಮರ್ಥ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್​ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದ ವೇಳೆ ಜಡೇಜಾ ಹೆಲ್ಮೆಟ್​ಗೆ ಚೆಂಡು ಬಡಿದಿತ್ತು. ಈ ಕಾರಣದಿಂದ ಅವರ ಬದಲು ಚಹಾಲ್ ಕನ್​ಕ್ಯೂಷನ್ ಆಟಗಾರನಾಗಿ ಆಡಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಿಂದ ಜಡೇಜಾ ಹೊರಬಿದ್ದಿದ್ದಾರೆ. ಇದು ಭಾರತ ತಂಡಕ್ಕೆ ತುಂಬಲಾರದ ನಷ್ಟ ಎಂದು ಅವರು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

" ರವೀಂದ್ರ ಜಡೇಜಾ ಸತತ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಮ್​ ಇಂಡಿಯಾ ಪರ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ತಾವೊಬ್ಬ ಮೌಲ್ಯಯುತ ಹಾಗೂ ತಂಡದ ಸಮತೋಲನಕ್ಕೆ ಅಗತ್ಯವಾಗಿರುವ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ" ಎಂದು ಟ್ವೀಟ್​ನಲ್ಲಿ ಕೈಫ್​ ತಿಳಿಸಿದ್ದಾರೆ.

ಇದನ್ನು ಓದಿ: ಲಾರಾ ಘೋಷಿಸಿದ ಈ ಯುಗದ ಶ್ರೇಷ್ಠ ಬ್ಯಾಟ್ಸ್​ಮನ್​-ಬೌಲರ್​ಗಳ​​​ ಪಟ್ಟಿಯಲ್ಲಿ ಕೊಹ್ಲಿ-ಬುಮ್ರಾ!

" ಅವರು 11 ವರ್ಷಗಳಿಂದ ಇದೇ ರೀತಿಯ ಪ್ರದರ್ಶನ ತೋರುತ್ತಿದ್ದರೂ ಅವರನ್ನು ಕಡೆಗಣಿಸಲಾಗುತ್ತಿದೆ. ಖಂಡಿತ ಅವರು ಈಗ ಪಡೆಯುವತ್ತಿವುದಕ್ಕಿಂತ ಹೆಚ್ಚಿನ ಗೌರವ ಪಡೆಯಲೂ ಅವರು ಅರ್ಹರು. ಅವರ ಸೇವೆಯನ್ನು ಮುಂದಿನ ಪಂದ್ಯಗಳಲ್ಲಿ ಭಾರತ ಮಿಸ್​ ಮಾಡಿಕೊಳ್ಳುತ್ತಿರುವುದಕ್ಕೆ ಬೇಸರವಾಗುತ್ತಿದೆ" ಎಂದು ಕೈಫ್​ ಟ್ವೀಟ್ ಮಾಡಿದ್ದಾರೆ.

ಜಡೇಜಾ ಕೊನೆಯ ಏಕದಿನ ಪಂದ್ಯದಲ್ಲಿ 66 ರನ್​, ಹಾಗೂ ಮೊದಲ ಟಿ-20 ಪಂದ್ಯದಲ್ಲಿ 23 ಎಸೆತಗಳಲ್ಲಿ 44 ರನ್​ ಚಚ್ಚಿದ್ದರು.

ಇದನ್ನು ಓದಿ: ರವೀಂದ್ರ ಜಡೇಜಾಗೆ ಚಹಾಲ್​ ಸರಿಸಮನಾದ ಆಟಗಾರನೇ?: ಆಸೀಸ್​ ತಂಡದ ಹೆನ್ರಿಕ್ಸ್ ಪ್ರಶ್ನೆ​

ABOUT THE AUTHOR

...view details