ಕರ್ನಾಟಕ

karnataka

ETV Bharat / sports

ಆರ್​ಸಿಬಿ ಅಚ್ಚರಿ ನಿರ್ಧಾರ: ಜೋಶ್​ ಫಿಲಿಪ್ಪೆ, ದೇವದತ್​ ಪಡಿಕ್ಕಲ್ ಇಬ್ಬರಿಗೂ ಅವಕಾಶ​

ದೇವದತ್​ ಪಡಿಕ್ಕಲ್​ ಕಳೆದ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್​ಗಳಲ್ಲಿ 176ರ ಸ್ಟ್ರೈಕ್​ ರೇಟ್​ನಲ್ಲಿ 580 ರನ್​ಗಳಿಸಿದ್ದಾರೆ. ಇನ್ನು ಜೋಶ್ ಫಿಲಿಪ್ಪೆ ಬಿಗ್​ಬ್ಯಾಶ್​ನಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ್ದರು. ಅವರು 16 ಪಂದ್ಯಗಳಲ್ಲಿ 487 ರನ್​ ಸಿಡಿಸಿದ್ದರು. ಜೊತೆಗೆ ವಿಕೆಟ್​ ಕೀಪರ್​ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

By

Published : Sep 21, 2020, 7:29 PM IST

ಆರ್​ಸಿಬಿ ಹಾಗೂ ಸನ್​ರೈರ್ಸ್​ ಹೈದರಾಬಾದ್​
ಆರ್​ಸಿಬಿ ಹಾಗೂ ಸನ್​ರೈರ್ಸ್​ ಹೈದರಾಬಾದ್​

ದುಬೈ: ಕರ್ನಾಟಕದ ರನ್ ಮಷಿನ್​ ದೇವದತ್​ ಪಡಿಕ್ಕಲ್​ ಹಾಗೂ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್​ಮನ್​ ಜೋಶ್​ ಫಿಲಿಪ್ಪೆ ಇಬ್ಬರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸುತ್ತಿದೆ.

ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಕೊಹ್ಲಿ ಪಡೆ ಈ ಬಾರಿ ಅತ್ಯುತ್ತಮ ತಂಡವನ್ನು ಹೊಂದಿದ್ದು, 13ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಹಂಬಲದಲ್ಲಿದೆ. ತಂಡದಲ್ಲೂ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಫಿಂಚ್​ ಜೊತೆಗೆ ದೇವದತ್ ಪಡಿಕ್ಕಲ್​ ಹಾಗೂ ಜೋಶ್​ ಫಿಲಿಪ್ಪೆಗೂ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಿದೆ.

ದೇವದತ್​ ಪಡಿಕ್ಕಲ್​ ಕಳೆದ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್​ಗಳಲ್ಲಿ 176ರ ಸ್ಟ್ರೈಕ್​ ರೇಟ್​ನಲ್ಲಿ 580 ರನ್​ಗಳಿಸಿದ್ದಾರೆ. ಇನ್ನು ಜೋಶ್ ಫಿಲಿಪ್ಪೆ ಬಿಗ್​ಬ್ಯಾಶ್​ನಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ್ದರು. ಅವರು 16 ಪಂದ್ಯಗಳಲ್ಲಿ 487 ರನ್​ ಸಿಡಿಸಿದ್ದರು. ಜೊತೆಗೆ ವಿಕೆಟ್​ ಕೀಪರ್​ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಇದೇ ಪಂದ್ಯದಲ್ಲಿ ಎಸ್​ ಆರ್​ಹೆಚ್​ ಕೂಡ ಅಂಡರ್​ 19 ತಂಡದ ನಾಯಕ ಪ್ರಿಯಂ ಗರ್ಗ್​ಗೆ ಅವಕಾಶ ನೀಡಿದೆ.

ABOUT THE AUTHOR

...view details