ಕರ್ನಾಟಕ

karnataka

By

Published : Jan 18, 2021, 4:53 PM IST

ETV Bharat / sports

ಗಾಯದ ನೋವಿನಲ್ಲೂ ಆಡಿ ಸೋಲು ತಪ್ಪಿಸಿದ್ದ ವಿಹಾರಿಯನ್ನ ಸನ್ಮಾನಿಸಿದ ತೆಲಂಗಾಣ ಮಿನಿಸ್ಟರ್​!

ವಿಹಾರಿ 3ನೇ ಪಂದ್ಯದ ನಂತರ ತವರಿಗೆ ಮರಳಿದ್ದು, ಹೈದರಾಬಾದ್​ಗೆ ಬಂದೊಡನೆ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮ ರಾವ್​ ಪ್ರಗತಿ ಭವನ​ಕ್ಕೆ ಕರೆಯಿಸಿ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರಿಕೆಟ್​ ಬಗ್ಗೆ ಕೆಲವು ಸಮಯ ಚರ್ಚಿಸಿದ್ದಾರೆ..

ಭಾರತ vs ಆಸ್ಟ್ರೇಲಿಯಾ ಟೆಸ್ಟ್​ ಸರಣಿ
ಹನುಮ ವಿಹಾರಿ

ಹೈದರಾಬಾದ್​ :ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ 2ನೇ ಹಂತದ ಗಾಯಕ್ಕೊಳಗಾದ್ರೂ ಸುಮಾರು ಎರಡುವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಭಾರತ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದ ಹನುಮ ವಿಹಾರಿಯವರನ್ನು ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವರು ಭೇಟಿ ಮಾಡಿ ಸನ್ಮಾನಿಸಿದ್ದಾರೆ.

ಜನವರಿ 11 ರಂದು ಮುಕ್ತಾಯಗೊಂಡಿದ್ದ ಸಿಡ್ನಿ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 250ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ವಿಹಾರಿ ಕ್ರೀಸ್​ಗೆ ಆಗಮಿಸಿದ್ದರು. ಅವರು ಕೆಲವೇ ಎಸೆತಗಳನ್ನು ಎದುರಿಸಿದ್ದ ಸಂದರ್ಭದಲ್ಲಿ ಹ್ಯಾಮ್​ಸ್ಟಿಂಗ್​ ನೋವಿನಿಂದ ಬಳಲಿದ್ದರು. ಆದರೂ ಅವರು 80ನೇ ಓವರ್​ನಿಂದ 131ನೇ ಓವರ್​ ಮುಗಿಯುವವರೆಗೂ ಮೈದಾನದಲ್ಲಿ ಭಾರತ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದರು. ವಿಹಾರಿ 161 ಎಸೆತಗಳನ್ನು ಎದುರಿಸಿ 23 ರನ್​ಗಳಿಸಿದ್ದರು.

ಹನುಮ ವಿಹಾರಿಗೆ ಸನ್ಮಾನ

ವಿಹಾರಿ 3ನೇ ಪಂದ್ಯದ ನಂತರ ತವರಿಗೆ ಮರಳಿದ್ದು, ಹೈದರಾಬಾದ್​ಗೆ ಬಂದೊಡನೆ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮ ರಾವ್​ ಪ್ರಗತಿ ಭವನ​ಕ್ಕೆ ಕರೆಯಿಸಿ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರಿಕೆಟ್​ ಬಗ್ಗೆ ಕೆಲವು ಸಮಯ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಟಿಆರ್​ ತಮ್ಮನ್ನು ಸನ್ಮಾನಿಸುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹನುಮ ವಿಹಾರಿ ಶೇರ್ ಮಾಡಿಕೊಂಡಿದ್ದಾರೆ. "ನಿಮ್ಮನು ಭೇಟಿ ಮಾಡಿದ್ದು ಮತ್ತು ಕ್ರಿಕೆಟ್​ ಬಗ್ಗೆ ಮಾತನಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಸರ್"​ ಎಂದು ವಿಹಾರಿ ಬರೆದುಕೊಂಡಿದ್ದಾರೆ.

ABOUT THE AUTHOR

...view details