ರಾಂಚಿ: ಇಲ್ಲಿ ನಡೆದ ದೇವ್ಧರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡ ಭಾರತ ಸಿ ತಂಡದ ವಿರುದ್ಧ 51 ರನ್ಗಳಿಂದ ಜಯಗಳಿಸಿ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಭಾರತ ಬಿ ತಂಡ ನೀಡಿದ್ದ 284 ರನ್ಗಳ ಗುರಿ ಬೆನ್ನತ್ತಿದ ಭಾರತ ಸಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಶುಬಮನ್ ಗಿಲ್ ವಿಕೆಟ್ ಬೀಳುತಿದ್ದಂತೆ ನಿದಾನಗತಿಯಲ್ಲಿ ರನ್ ಗಳಿಸುತ್ತಾ ಸಾಗಿತು. ಆಟಗಾರರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 77 ರನ್ ತಲುಪುವಷ್ಟರಲ್ಲೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.
ಈ ವೇಳೆ ತಂಡಕ್ಕೆ ಆಸರೆಯಾದ ಪ್ರಿಯಮ್ ಗರ್ಗ್ 74 ರನ್ ಸಿಡಿಸಿ ಉತ್ತಮ ಆಟ ಪ್ರದರ್ಶಿಸಿದರಾದರು ತಂಡವನ್ನ ಗೆಲ್ಲಿಸಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಸಿ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 232 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ 51 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಬಿ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಆರಂಭಿ ಆಟಗಾರು ಬಂದಷ್ಟೆ ವೇಗವಾಗಿ ಪರವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾದವ್ ತಂಡಕ್ಕೆ ಆಸರೆಯಾದ್ರು. ಭರ್ಜರಿ 86 ರನ್ ಸಿಡಿಸುವ ಮೂಲಕ ತಂಡ ಮೊತ್ತ ಹೆಚ್ಚಿಸಿದ್ರು. ಮತ್ತೊಬ್ಬ ಆಟಗಾರ ಯಶಸ್ವಿ ಜೈಸ್ವಾಲ್ ಅರ್ಧ ಶತಕ(54) ಸಿಡಿಸಿ ಮಿಂಚಿದ್ರು.ಉತ್ತಮವಾಗಿ ಬ್ಯಾಟ್ ಬೀಸಿದ ವಿಜಯ್ ಶಂಕರ್ 45 ರನ್ ಗಳಿಸಿದ್ರು.
49ನೇ ಓವರ್ನಲ್ಲಿ ಬ್ಯಾಟಿಂಗ್ಗೆ ಇಳಿದ ಕನ್ನಡಿಗ ಕೆ.ಗೌತಮ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ರು. ಒಂದೇ ಓವರ್ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ರು.