ವಿಶಾಖಪಟ್ಟಣ: ಸರಣಿ ಗೆಲ್ಲಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೊಹ್ಲಿ ಬಳಗಕ್ಕೆ ಎರಡನೇ ಪಂದ್ಯದಲ್ಲೂ ಟಾಸ್ನಲ್ಲಿ ಹಿನ್ನಡೆಯಾಗಿದೆ. ಟಾಸ್ ಗೆದ್ದ ಪೊಲಾರ್ಡ್ ಇಂದೂ ಕೂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ 287 ರನ್ಗಳಿಸಿಯೂ ಕಳಪೆ ಬೌಲಿಂಗ್ ಪ್ರದರ್ಶನ ತೋರಿ ಸೋಲುಕಂಡಿದ್ದರಿಂದ ಕೊಹ್ಲಿ ಆಲ್ರೌಂಡರ್ ಶಿವಂ ದುಬೆಯನ್ನು ಹೊರಗಿಟ್ಟು ವೇಗಿ ಶಾರ್ದುಲ್ ಟಾಕೂರ್ಗೆ ಅವಕಾಶ ನೀಡಿದ್ದಾರೆ.
ವಿಂಡೀಸ್ ತಂಡ ಕೂಡ ಎರಡು ಬದಲಾವಣೆ ಮಾಡಿಕೊಂಡಿದ್ದು, ಎವಿನ್ ಲೆವಿಸ್ ಹಾಗೂ ಸ್ಪಿನ್ನರ್ ಖಾರಿ ಪೀರೆ ತಂಡ ಸೇರಿಕೊಂಡಿದ್ದು ಆಂಬ್ರಿಸ್ ಹಾಗೂ ವಾಲ್ಶ್ ಹೊರಗುಳಿದಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉ.ನಾ) ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆದಾರ್ ಜಾದವ್,ರವೀಂದ್ರ ಜಡೇಜಾ, ಕುಲ್ದೀಪ್ ಚಹಲ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಶಾರ್ದುಲ್ ಟಾಕೂರ್
ವೆಸ್ಟ್ ಇಂಡೀಸ್: ಶಾಯ್ ಹೋಪ್, ಇವೆನ್ ಲೆವಿಸ್, ಶಿಮ್ರಾನ್ ಹೆಟ್ಮಯರ್,ರಾಸ್ಟನ್ ಚೇಸ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಖಾರಿ ಪೆರ್ರಿ, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಪ್, ಕೀಮೋ ಪಾಲ್