ಕರ್ನಾಟಕ

karnataka

ETV Bharat / sports

ಚೇಸಿಂಗ್ ಸ್ವರ್ಗದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಿರಾಟ್..! - ವಿರಾಟ್ ಕೊಹ್ಲಿ ಸುದ್ದಿ

ಸರಣಿ ಗೆಲ್ಲುವ ನಿಟ್ಟಿನಲ್ಲಿ ಟೀಂ ಇಂಡಿಯಾಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇನ್ನೊಂದೆಡೆ ಈ ಮ್ಯಾಚ್ ಗೆದ್ದು ಸರಣಿ ಸೋಲಿನ ಭೀತಿ ತಪ್ಪಿಸಿಕೊಳ್ಳಲು ಆಫ್ರಿಕನ್ನರು ಪ್ಲಾನ್ ಮಾಡಿದ್ದಾರೆ.

ವಿರಾಟ್

By

Published : Sep 22, 2019, 6:44 PM IST

Updated : Sep 22, 2019, 6:50 PM IST

ಬೆಂಗಳೂರು: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲಿ ರನ್​ ಹೊಳೆ ಹರಿಯುವ ಸಾಧ್ಯತೆ ಇದೆ.

ಸರಣಿ ಗೆಲ್ಲುವ ನಿಟ್ಟಿನಲ್ಲಿ ಟೀಂ ಇಂಡಿಯಾಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇನ್ನೊಂದೆಡೆ ಈ ಮ್ಯಾಚ್ ಗೆದ್ದು ಸರಣಿ ಸೋಲಿನ ಭೀತಿ ತಪ್ಪಿಸಿಕೊಳ್ಳಲು ಆಫ್ರಿಕನ್ನರು ಪ್ಲಾನ್ ಮಾಡಿದ್ದಾರೆ.

ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಇಲ್ಲದೆ ಮೈದಾನಕ್ಕಿಳಿಯಲಿದೆ. ಅತ್ತ ದಕ್ಷಿಣ ಆಫ್ರಿಕಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ನೋರ್ಟ್​ಜೆ ಬದಲಿಗೆ ಹೆಂಡ್ರಿಕ್ಸ್ ಕಣಕ್ಕಿಳಿಯುತ್ತಿದ್ದಾರೆ.

4 ದಿನಗಳ ಹಿಂದೆ ಕೊಹ್ಲಿ ಹೆಸರಿಗೆ ಸೇರಿದ್ದ ವಿಶ್ವದಾಖಲೆ ಮುರಿಯಲು ಹಿಟ್​ಮ್ಯಾನ್​ಗೆ ಬೇಕು 8 ರನ್

ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಮೊಹಾಲಿಯಲ್ಲಿನ ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿ ಪಡೆ ಏಳು ವಿಕೆಟ್​​ಗಳ ಸುಲಭ ಜಯ ಸಾಧಿಸಿತ್ತು.​

ಟೀಂ ಇಂಡಿಯಾ:

ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ನವ್​ದೀಪ್ ಸೈನಿ

ದಕ್ಷಿಣ ಆಫ್ರಿಕಾ:

ರೀಜಾ ಹೆಂಡ್ರಿಕ್ಸ್, ಕ್ವಿಂಟನ್ ಡಿಕಾಕ್, ತೆಂಬಾ ಬವುಮಾ, ರಸ್ಸಿ ವೆನ್​​ಡರ್​ ದಸ್ಸೆನ್​​, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಸ್, ಆ್ಯಂಡಿಲ್ ಪೆಹ್ಲುಕ್ವಾಯೋ, ಬಿಜೋರ್ನ್ ಫಾರ್ಟಿನ್, ಕಗಿಸೋ ರಬಾಡ, ಬ್ಯೂರೆನ್ ಹೆಂಡ್ರಿಕ್ಸ್, ತಬ್ರೈಜ್​ ಶಂಸಿ

Last Updated : Sep 22, 2019, 6:50 PM IST

ABOUT THE AUTHOR

...view details