ಕರ್ನಾಟಕ

karnataka

ಆರ್​ಸಿಬಿ ಟೀಂಗೆ ಈ ಸಲ ಕಪ್​ ಗೆಲ್ಲೋಕೆ ಸಲಹೆ ನೀಡಿದ್ರು ವಿಜಯ್​ ಮಲ್ಯ​!

ಆರ್​ಸಿಬಿ ತಂಡದ ನಾಯಕನಾಗಿರುವ ವಿರಾಟ್​ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ರೆ ಕಪ್​ ಗೆಲ್ಲಬಹುದು ಎಂದು ಈ ಹಿಂದೆ ಆರ್​ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ಹೇಳಿದ್ದಾರೆ.

By

Published : Feb 16, 2020, 6:01 PM IST

Published : Feb 16, 2020, 6:01 PM IST

Vijay Mallya Takes a Dig at RCB,ಆರ್​ಸಿಬಿಗೆ ವಿಜಯ್​ ಮಲ್ಯ​ ಸಲಹೆ
ಆರ್​ಸಿಬಿಗೆ ವಿಜಯ್​ ಮಲ್ಯ​ ಸಲಹೆ

ಹೈದರಾಬಾದ್(ತೆಲಂಗಾಣ): ನೂತನ ಲೋಗೋ, ಜರ್ಸಿಯೊಂದಿಗೆ ಕಣಕ್ಕಿಳಿಯಲಿರುವ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಈ ಬಾರಿ ಹೊಸ ಹುರುಪಿನೊಂದಿಗೆ ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಈ ಮಧ್ಯೆ ಆರ್​ಸಿಬಿಗೆ ಮದ್ಯದ ದೊರೆ ವಿಜಯ್​ ಮಲ್ಯ ಗೆಲುವಿನ​ ಕುರಿತು ಸಲಹೆ ನೀಡಿದ್ದಾರೆ.

ಈ ಹಿಂದೆ ಆರ್​ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ತಂಡಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ವಿಜಯ್​ ಮಲ್ಯ, 'ವಿರಾಟ್​ ಕೊಹ್ಲಿ ಅಂಡರ್​-19 ತಂಡದಿಂದ ಆರ್​ಸಿಬಿ ತಂಡಕ್ಕೆ ಬಂದಿದ್ದಾರೆ. ಸ್ವತಃ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್​ ಟೀಂ ಇಂಡಿಯಾವನ್ನ ಮುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿಗೆ ಸ್ವಾತಂತ್ರ್ಯ ನೀಡಿ. ಆರ್​ಸಿಬಿ ಅಭಿಮಾನಿಗಳು ದೀರ್ಘ ಕಾಲದಿಂದ ಐಪಿಎಲ್​ ಟ್ರೋಫಿಗೆ ಎದುರು ನೋಡುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಆರ್​ಸಿಬಿ ತಂಡದ ನಾಯಕನಾಗಿರುವ ವಿರಾಟ್​ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ರೆ ಕಪ್​ ಗೆಲ್ಲಬಹುದು ಎಂದು ವಿಜಯ್​ ಮಲ್ಯ ಹೇಳಿದ್ದಾರೆ. ಮೊದಲನೇ ಆವೃತ್ತಿಯಿಂದ 2011ರ ವರೆಗೆ ವಿಜಯ್ ಮಲ್ಯ ಆರ್​ಸಿಬಿ ತಂಡದ ಮಾಲೀಕರಾಗಿದ್ದರು.

ಅಲ್ಲದೆ ಅರ್​ಸಿಬಿ ಅಭಿಮಾನಿಗಳು ಬಹಳ ಕಾಲದಿಂದ ಕಪ್​ಗಾಗಿ ಎದುರು ನೋಡುತ್ತಿದ್ದಾರೆ ಈ ಬಾರಿ ಕಪ್​ ಗೆದ್ದು ತನ್ನಿ ಎಂದು ಮಲ್ಯ ಶುಭ ಹಾರೈಸಿದ್ದಾರೆ.

ABOUT THE AUTHOR

...view details