ಕರ್ನಾಟಕ

karnataka

By

Published : Sep 30, 2019, 6:59 PM IST

ETV Bharat / sports

4ನೇ ಕ್ರಮಾಂಕಕ್ಕೆ ಹೊಸ ಹೆಸರು ಸೂಚಿಸಿದ ಭಜ್ಜಿ ಕಾಲೆಳೆದ ಯುವರಾಜ್​!... ಅಷ್ಟಕ್ಕೂ ಆ ಆಟಗಾರ ಯಾರು?

ದೇಶಿ ಕ್ರಿಕೆಟ್​ನಲ್ಲಿ ಪ್ರತಿ ಬಾರಿಯೂ ಉತ್ತಮ ರನ್​ಗಳಿಸುತ್ತಿರುವ ಸೂರ್ಯಕುಮಾರ್​ ಯಾದವ್​ರನ್ನು ಭಾರತ ತಂಡಕ್ಕೆ ಏಕೆ ಆಯ್ಕೆ ಮಾಡುತ್ತಿಲ್ಲವೋ ನನಗೆ ಗೊತ್ತಿಲ್ಲ ಎಂದು ಹರಭರ್ಜನ್​ ಬಿಸಿಸಿಐ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ,

ಹರ್ಭಜನ್​

ಮುಂಬೈ: ಭಾರತ ತಂಡಕ್ಕೆ 4-5 ವರ್ಷಗಳಿಂದ 4ನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನನ್ನು ಆಯ್ಕೆಮಾಡಲಾಗದೇ ಬಿಸಿಸಿಐ ಗೊಂದಲದಲ್ಲಿದೆ. ಅದಕ್ಕಾಗಿ ಹರ್ಭಜನ್​ ಮುಂಬೈ ಆಟಗಾರನೊಬ್ಬನನ್ನು ಸೂಚಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡದಲ್ಲಿ ಹಾಗೂ ದೇಶಿ ಕ್ರಿಕೆಟ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್​ ಯಾದವ್​ ಅವರನ್ನು ಭಾರತ ತಂಡದ 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಯಾದವ್​ ಫೋಟೋ ಶೇರ್​ ಮಾಡಿ ವೈರಲ್​ ಮಾಡುತ್ತಿದ್ದಾರೆ.

ಸೂರ್ಯಕುಮಾರ್​ ಯಾದವ್​

ಇಂತಹದ್ದೇ ಒಂದು ಫೋಟೋವನ್ನು ಟ್ವೀಟ್​ ಮಾಡಿರುವ ಹರ್ಭಜನ್​, " ದೇಶಿ ಕ್ರಿಕೆಟ್​ನಲ್ಲಿ ಪ್ರತಿ ಬಾರಿಯೂ ಉತ್ತಮ ರನ್​ಗಳಿಸುತ್ತಿರುವ ಸೂರ್ಯಕುಮಾರ್​ ಯಾದವ್​ ಅವರನ್ನು ಭಾರತ ತಂಡಕ್ಕೆ ಏಕೆ ಆಯ್ಕೆ ಮಾಡುತ್ತಿಲ್ಲವೋ ನನಗೆ ಗೊತ್ತಿಲ್ಲ. ಆದರೆ, ನೀನು ಹೀಗೆ ನಿನ್ನ ಕಠಿಣ ಪರಿಶ್ರಮ ಮುಂದುವರಿಸು, ನಿನಗೂ ಸಮಯ ಕೂಡಿ ಬರುತ್ತದೆ" ಎಂದು ಟ್ವೀಟ್​ ಮಾಡಿದ್ದರು.

ಭಜ್ಜಿ ಈ ಟ್ವೀಟ್​ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಯುವರಾಜ್​, "ನಾನು ನಿನಗೆ ಹೇಳಿಲ್ವಾ, ಅವರಿಗೆ(ಟೀಮ್​ ಇಂಡಿಯಾ) 4ನೇ ಕ್ರಮಾಂಕ ಬೇಕಿಲ್ಲ, ಏಕೆಂದರೆ ಮೇಲಿನ ಕ್ರಮಾಂಕ​ ತುಂಬ ಬಲಿಷ್ಠವಾಗಿದೆ" ಎಂದು ವ್ಯಂಗ್ಯಾತ್ಮಕವಾಗಿ ಉತ್ತರಿಸಿದ್ದಾರೆ.

ಸೂರ್ಯ ಕುಮಾರ್​ ಯಾದವ್​ ಮೊನ್ನೆಯಷ್ಟೇ ಛತ್ತೀಸ್​ಗಢದ ವಿರುದ್ಧ ವಿಜಯ್​ ಹಜಾರೆ ಟ್ರೋಫಿಯಲ್ಲಿ ಕೇವಲ 31 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 8 ಬೌಂಡರಿಗಳ ನೆರವಿನಿಂದ 81 ರನ್​ಗಳಿಸಿದ್ದರು.

For All Latest Updates

TAGGED:

ABOUT THE AUTHOR

...view details