ಕರ್ನಾಟಕ

karnataka

ETV Bharat / sports

ತಮ್ಮ ಪುತ್ರಿಯರ ಪಾದಪೂಜೆ ಮಾಡಿ ಆಶೀರ್ವಾದ ಪಡೆದ ಗೌತಮ್ ಗಂಭೀರ್‌.. - Ashtami Kanjak special

ನವರಾತ್ರಿ ವಿಶೇಷವಾಗಿ ಕೆಲವು ಕಡೆ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಆದರೆ, ಗಂಭೀರ್​ ತಮ್ಮ ಮಕ್ಕಳ ಪಾದಪೂಜೆಯನ್ನೇ ಮಾಡುವ ಮೂಲಕ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

Gautam Gambhir

By

Published : Oct 8, 2019, 5:49 PM IST

ನವದೆಹಲಿ: ನವರಾತ್ರಿ ಹಬ್ಬದ ವಿಶೇಷವಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ತಮ್ಮ ಎರಡು ಹೆಣ್ಣಮಕ್ಕಳ ಪಾದಪೂಜೆ ಮಾಡುವ ಮೂಲಕ ಆಶೀರ್ವಾದ ಪಡೆದುಕೊಂಡಿದ್ದಾರೆ.

ನವರಾತ್ರಿ ವಿಶೇಷವಾಗಿ ಕೆಲವು ಕಡೆ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಆದರೆ, ಗಂಭೀರ್​ ತಮ್ಮ ಮಕ್ಕಳ ಪಾದಪೂಜೆಯನ್ನೇ ಮಾಡುವ ಮೂಲಕ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

ನಾನೊಬ್ಬ ಎರಡು ಹೆಣ್ಣುಮಕ್ಕಳ ತಂದೆಯಾಗಿದ್ದು,ಪಾದೋಪಚಾರ(ಪೆಡಿಕ್ಯೂರ್​)ಕೌಶಲ್ಯಗಳನ್ನು ಕ್ರಮೇಣ ಉತ್ತಮಗೊಳಿಸಿಕೊಂಡಿದ್ದೇನೆ.. ಇದರ ಜೊತೆಗೆ ಅಷ್ಟಮಿ ಪ್ರಯುಕ್ತ ಆಶೀರ್ವಾದವನ್ನೂ ತೆಗೆದುಕೊಂಡಿದ್ದೇನೆ. ಆದರೆ, ನಾನು ಮಾಡಿದ ಕೆಲಸಕ್ಕೆ ಬಿಲ್​ ಯಾರಿಗೆ ಕಳುಹಿಸ ಬೇಕು ಎಂದು ತಮ್ಮ ಹೆಂಡತಿಯನ್ನು ಟ್ಯಾಗ್​ ಮಾಡಿ ತಮಾಷೆಯ ಟ್ವೀಟ್​ ಮಾಡಿದ್ದಾರೆ.

ಒಬ್ಬ ಸಂಸದರಾಗಿ, ಮಾಜಿ ಕ್ರಿಕೆಟಿಗನಾಗಿ ದೇಶದಲ್ಲಿ ಉತ್ತಮ ಹೆಸರು ಮಾಡಿರುವ ಗಂಭೀರ್​ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details