ಕರ್ನಾಟಕ

karnataka

ಚೊಚ್ಚಲ ಪಂದ್ಯದಲ್ಲೇ ಸೈನಿ ಶೈನ್‌! ಸಂತೋಷದ ಜೊತೆಗೆ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದೇಕೆ?

By

Published : Aug 3, 2019, 9:53 PM IST

ವಿಂಡೀಸ್​ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್‌ ಪಡೆದು ಮಿಂಚಿದ ಸೈನಿ ಸಾಧನೆಯನ್ನು ಹೊಗಳಿರುವ ಗಂಭೀರ್,​ ಆರಂಭದಲ್ಲಿ ಸೈನಿ ಕ್ರಿಕೆಟ್​ ಜೀವನಕ್ಕೆ ಮುಳ್ಳಾಗಿದ್ದ ಬಿಷನ್​ ಸಿಂಗ್ ಬೇಡಿ ಹಾಗೂ ಚೇತನ್​ ಚೌಹಾಣ್‌ರನ್ನು ಟ್ವೀಟ್​ ಮೂಲಕ ಛೇಡಿಸಿದ್ದಾರೆ.

India vs West Indies

ಪ್ಲೋರಿಡಾ (ಅಮೆರಿಕ): ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸೈನಿ ಮೊದಲ ಪಂದ್ಯದಲ್ಲೇ 2 ವಿಕೆಟ್​ ಪಡೆದು ಮಿಂಚಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಅವರ ಕ್ರಿಕೆಟ್ ಗುರು ಗಂಭೀರ್,​ ಸೈನಿ ಕ್ರಿಕೆಟ್​ ಜೀವನಕ್ಕೆ ಆರಂಭದಲ್ಲಿ ಮುಳುವಾಗಿದ್ದ​ ಹಿರಿಯ ಆಟಗಾರರನ್ನು ತೆಗಳುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಕೇವಲ ಟೆನ್ನಿಸ್​ ಬಾಲ್ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡುತ್ತಿದ್ದ ಸಮಾನ್ಯ ಮಧ್ಯಮ ವರ್ಗದ ಯುವಕನಿಗೆ ಆತ್ಮವಿಶ್ವಾಸ ತುಂಬಿ ಆತನ ಕ್ರಿಕೆಟ್​ ಜೀವನಕ್ಕೆ ಜೀವ ತುಂಬಿದ್ದ ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಖುಷಿ ವಿಚಾರವನ್ನು ಕೋಪದ ಮೂಲಕ ತಿಳಿಸಿದ್ದಾರೆ. ಅದಕ್ಕೆ ಕಾರಣ ದೆಹಲಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಬಿಷನ್​ ಸಿಂಗ್ ಬೇಡಿ ಹಾಗೂ ಚೇತನ್​ ಚೌಹಾನ್ ಎಂಬುದು ಹಳೆ ವಿಚಾರ.

ರಣಜಿ ಕ್ರಿಕೆಟ್​ಗೆ ತಂಡದ ಆಯ್ಕೆಯ ವೇಳೆ ಸೈನಿಯನ್ನು ಸ್ಥಳೀಯನಲ್ಲ ಎಂದು ಬೇಡಿ ಹಾಗೂ ಚೌಹಾನ್​ ಆಯ್ಕೆ ಮಾಡಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಗಂಭೀರ್​ ಅವರಿಬ್ಬರ ವಿರುದ್ಧ ಕಿಡಿ ಕಾರಿದ್ದರು. ಗಂಭೀರ್ ಹೋರಾಟ ಮಾಡಿ ತಮ್ಮ ಹಠದಿಂದ ರಣಜಿಯಲ್ಲಿ ಸೈನಿಗೆ ಅವಕಾಶ ಕೊಡಿಸಿದ್ದರು. ನಂತರ ಸೈನಿ ಟೆಸ್ಟ್​ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲೂ ಅವರಿಬ್ಬರನ್ನು ಕಾಲೆಳೆದಿದ್ದ ಗಂಭೀರ್​ ಇಂದೂ ಕೂಡ ಟ್ವೀಟ್​ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಇಂದು ಸೈನಿ ಮೊದಲ ಓವರ್​ನಲ್ಲೇ ಎರಡು ವಿಕೆಟ್​ ಪಡೆಯುತ್ತಿದ್ದಂತೆ ಟ್ವೀಟ್​ ಮಾಡಿರುವ ಗಂಭೀರ್​ " ಸೈನಿ ಭಾರತ ತಂಡದ ಪರ ನಿನ್ನ ಪದಾರ್ಪಣೆ ಅದ್ಭುತವಾಗಿತ್ತು. ಮೊದಲ ಓವರ್​ನಲ್ಲೇ 2 ವಿಕೆಟ್​ ಪಡೆದಿದ್ದೀಯ. ಈ ಪ್ರದರ್ಶನ ನೋಡಿ ಬಿಷನ್​ ಸಿಂಗ್​ ಬೇಡಿ ಹಾಗೂ ಚೇತನ ಶರ್ಮಾರಿಗೆ ತಮ್ಮ ಮಧ್ಯದ ವಿಕೆಟ್​ ಬಿದ್ದಂತಾಗಿದೆ. ನೀನು ಮೈದಾನಕ್ಕಿಳಿಯುವ ಮುನ್ನವೇ ನಿನ್ನನ್ನು ತುಳಿಯಲು ನೋಡಿದವರಿಗೆ ಅವಮಾನವಾಗಿದೆ" ಎಂದು ಟ್ವೀಟ್​ ಮೂಲಕ ಮಾಜಿ ಆಟಗಾರರ ಕಾಲೆಳೆದಿದ್ದಾರೆ.

ಇದು ಕಳೆದ ವರ್ಷದ ಟ್ವೀಟ್.​

ABOUT THE AUTHOR

...view details